21/06/2020
#ಪಿಒಕೆ_ಮರಳಿ_ಭಾರತಕ್ಕೆ•••
#ರಕ್ಷಣಾ_ಸಚಿವ_ರಾಜನಾಥಸಿಂಗ್.
#ಪ್ರಜಾವಾಣಿ_ವಾರ್ತೆ #ಜೂನ್_15_2020••
#ನವದೆಹಲಿ: ಪಾಕಿಸ್ತಾನವು ಅಕ್ರಮವಾಗಿ ತನ್ನ ವಶದಲ್ಲಿ ಇರಿಸಿಕೊಂಡಿರುವ ಭಾರತದ ಭೂಭಾಗವನ್ನು ಮರಳಿ ಪಡೆದುಕೊಳ್ಳಲಾಗುವುದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾನುವಾರ ಪುನರುಚ್ಚರಿಸಿದ್ದಾರೆ.
••••••••••••••
#ಇಂತಹದೇ ಹೇಳಿಕೆಯನ್ನು ಭಾರತದ ಗೃಹ ಸಚಿವರು, ಅಲ್ಲದೇ ಕೇಂದ್ರ ಸರ್ಕಾರದ ಹಲವು ಮುಖ್ಯಸ್ಥರು ಕೆಲವು ಸಂದರ್ಭಗಳಲ್ಲಿ ಹೇಳಿದ್ದಾರೆ, ಹೇಳುತ್ತಿದ್ದಾರೆ.
#1947ರ ಸ್ವಾತಂತ್ರ್ಯ ನಂತರ ಭಾರತ ಮತ್ತು ಪಾಕಿಸ್ತಾನ ರಾಷ್ಟ್ರಗಳ ನಡುವೆ ಬಗೆ ಹರಿಯದ ಗಡಿ ಸಮಸ್ಯೆಗಳು ಎರಡು ರಾಷ್ಟ್ರಗಳ ನಡುವೆ ಆಶಾಂತಿ, ಭಯೋತ್ಪಾದನೆ, ಯುದ್ಧಗಳನ್ನು ಸೃಷ್ಟಿಸಿ ಜನರ ಬದುಕನ್ನು ತಲ್ಲಣಗೊಳಿಸಿವೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಎಲ್ಲಾ ಭೂ ಭಾಗಗಳನ್ನು ಭಾರತದಲ್ಲಿ ಮರಳಿ ಸೇರ್ಪಡೆ ಮಾಡಿಕೊಳ್ಳುವುದರಿಂದ ಈ ಎಲ್ಲಾ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರ ಸಿಗುವುದಾದರೆ ಭಾರತೀಯರಷ್ಟು ಭಾಗ್ಯಶಾಲಿಗಳು ಯಾರೂ ಇಲ್ಲ. ದೇಶವು ಸಮಾಧಾನದ ಒಂದು ದೊಡ್ಡ ನಿಟ್ಟುಸಿರು ಬಿಡಬಹುದು.
#ಸ್ವಾತಂತ್ರ್ಯದ ಕಾಲದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಗಡಿ ಸಮಸ್ಯೆಯು ಉಂಟಾಯಿತು. ಈ ಕಾರಣದಿಂದ ಪಾಕಿಸ್ತಾನ ಮತ್ತು ಭಾರತಗಳ ನಡುವೆ ಉಂಟಾದ ಸಮರವು ಅಂತಿಮವಾಗಿ ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಿಂದಾಗಿ 1949ರಲ್ಲಿ ಕದನ ವಿರಾಮವನ್ನು ಘೋಷಣೆ ಮಾಡಿ ತಾತ್ಕಾಲಿಕ ಗಡಿ ರೇಖೆ Line of Control_LOCಯನ್ನು ಗುರುತಿಸಲಾಯಿತು.
#ಹೀಗಾಗಿ ಕಾಶ್ಮೀರದ ಮಹಾರಾಜ ಹರಿಸಿಂಗರ ಕಾಶ್ಮೀರPrincely state ಎರಡು ಭಾಗವಾಯಿತು. ಗಡಿಯ ಪೂರ್ವ ಭಾಗದಲ್ಲಿ ಭಾರತಕ್ಕೆ ಸೇರಿದ ಜಮ್ಮು ಮತ್ತು ಕಾಶ್ಮೀರ ರಾಜ್ಯ ರಚನೆಯಾಯಿತು. ಮತ್ತು ಗಡಿಯ ಪಶ್ಚಿಮ ಭಾಗದಲ್ಲಿ ವಿವಾದಾಸ್ಪದ ಪಾಕಿಸ್ತಾನ ಆಕ್ರಮಿತ ಕಾಶ್ಮೀರ_Pakistan Occupied Kashmir_POK ಎಂಬ ಪ್ರಾಂತ್ಯ ಸೃಷ್ಟಿಯಾಯಿತು. ಸರಳವಾಗಿ ಅರ್ಥ ಮಾಡಿಕೊಳ್ಳುವ ದೃಷ್ಟಿಯಿಂದ POK ಯಲ್ಲಿ ಎರಡು ಪ್ರಾಂತ್ಯಗಳು ಹುಟ್ಟಿಕೊಂಡವು.
ಅವುಗಳೆಂದರೆ----
1.ಆಜಾದ್ ಕಾಶ್ಮೀರ್-Azad Kashmir
2. ಗಿಲ್ಗಿಟ್- ಬಾಲ್ಟಿಸ್ಥಾನ್_Gilgit- Baltistan.
#ಈ ಎರಡು ಪ್ರಾಂತ್ಯಗಳೂ ಭಾರತದ ಅವಿಭಾಜ್ಯ ಭೂ ಭಾಗಗಳೆಂದು ಭಾರತವು ಅಧಿಕೃತವಾಗಿ ತನ್ನ ಭೂಪಟದಲ್ಲಿ ತೋರಿಸುತ್ತಲೇ ಬಂದಿದೆ. ಆದರೆ, ಈ ಎರಡೂ ಪ್ರಾಂತ್ಯಗಳು ಸಂಪೂರ್ಣವಾಗಿ ಪಾಕಿಸ್ತಾನದ ಆಡಳಿತಕ್ಕೆ ಒಳಪಟ್ಟಿರುವುದು ಮಾತ್ರ ವಾಸ್ತವ. POKನ ಎಲ್ಲ ಪ್ರದೇಶವು ಭಾರತದ ಭೂ ಭಾಗವೆಂದು ಭಾರತ ಸರ್ಕಾರವು ಅಂತರರಾಷ್ತ್ರೀಯ ಮಟ್ಟದಲ್ಲಿ ವಾದಿಸುತ್ತಲೇ ಬಂದಿರುವುದು ಸಮರ್ಪವಾಗಿದೆ.
#ಈ ಮೊದಲು ಇದ್ದ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಆಡಳಿತಾತ್ಮಕವಾಗಿ ಮೂರು ಭಾಗಗಳಾಗಿ ವಿಂಗಡಿಸಲಾಗಿತ್ತು. ಅವುಗಳೆಂದರೆ ಜಮ್ಮು ಪ್ರಾಂತ್ಯ, ಕಾಶ್ಮೀರ ಪ್ರಾಂತ್ಯ ಮತ್ತು ಲಡಾಖ್ ಪ್ರಾಂತ್ಯ. ಈ ಮೂರೂ ಪ್ರಾಂತ್ಯಗಳಿಂದಲೂ ಆಯ್ಕೆಯಾದ ವಿಧಾನಸಭಾ ಸದಸ್ಯರು ರಾಜ್ಯ ಸರ್ಕಾರವನ್ನು ರಚನೆ ಮಾಡಿಕೊಂಡು ಆಡಳಿತ ನಡೆಸುತ್ತಿದ್ದರು, ಲೋಕಸಭಾ ಸದಸ್ಯರು ಭಾರತದ ಸಂಸತ್ತನ್ನು ಪ್ರತಿನಿಧಿಸುತ್ತಿದ್ದರು. ಆದರೆ, ಇಡೀ ರಾಜ್ಯದಲ್ಲಿ ಭಯೋತ್ಪಾದನೆ, ಗಡಿ ಉಲ್ಲಂಘನೆ, ಸೈನಿಕರ ಜಮಾವಣೆ ಹೀಗೆ ಹತ್ತು ಹಲವಾರು ಸಮಸ್ಯೆಗಳು ಇಡೀ ರಾಜ್ಯವನ್ನು ನಿರಂತರವಾಗಿವೆ.
#ಭಾರತ ಸರ್ಕಾರವು ದಿನಾಂಕ 05-08-2019ರಿಂದ ಜಾರಿಗೆ ಬರುವಂತೆ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ನೀಡಲಾಗಿದ್ದ ಸಂವಿಧಾನದ ವಿಶೇಷಾಧಿಕಾರದ ಆರ್ಟಿಕಲ್ 370ನ್ನು ರದ್ದು ಮಾಡಿ, ಜಮ್ಮು ಮತ್ತು ಕಾಶ್ಮೀರ ರಾಜ್ಯದ ಸ್ಥಾನಮಾನವನ್ನು ರದ್ದುಗೊಳಿಸಿ, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಎಂಬ ಎರಡು ಹೊಸ ಕೇಂದ್ರಾಡಳಿತ ಪ್ರದೇಶಗಳನ್ನು ಸೃಷ್ಟಿಸಿತು
#ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಗಳು ತಮ್ಮದೇ ಆದ ಭೂಪ್ರದೇಶಗಳ ಭೂಪಟ/ನಕ್ಷೆಯನ್ನು ಒಳಗೊಂಡಂತೆ ದಿನಾಂಕ 31ಅಕ್ಟೋಬರ್ 2019ರಿಂದ ಹೊಸದಾಗಿ ಅಸ್ತಿತ್ವಕ್ಕೆ ಬಂದ ಎರಡು ಕೇಂದ್ರಾಡಳಿತ ಪ್ರದೇಶಗಳಾದವು.
#ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವು 42241 ಚದರ ಕಿಮೀ ಭೂ ಪ್ರದೇಶವನ್ನು ಹೊಂದಿದ್ದು, ಇಲ್ಲಿ ಜಮ್ಮು ಮತ್ತು ಕಾಶ್ಮೀರ ಎಂಬ ಎರಡು ವಲಯಗಳಿವೆ. ಜಮ್ಮು ವಲಯದಲ್ಲಿ ಹತ್ತು ಮತ್ತು ಕಾಶ್ಮೀರ ವಲಯದಲ್ಲಿ ಹತ್ತು, ಹೀಗೆ ಒಟ್ಟು 20 ಜಿಲ್ಲೆಗಳಿದ್ದು, ಇಲ್ಲಿ 1ಕೋಟಿ 22ಲಕ್ಷ 58ಸಾವಿರ ಮೀರಿದ ಜನಸಂಖ್ಯೆ ಇದೆ. ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಾನ ಸಭೆ ಅಸ್ತಿತ್ವವನ್ನು ಮತ್ತು ಲೋಕಸಭಾ ಸದಸ್ಯರ ಸ್ಥಾನಮಾನವನ್ನು ಉಳಿಸಿಕೊಳ್ಳಲಾಗಿದೆ, ರಾಜಧಾನಿಗಳಾಗಿ ಶ್ರೀನಗರ ಮತ್ತು ಜಮ್ಮು ಇರುತ್ತವೆ.
#ಲಡಾಖ್ ಕೇಂದ್ರಾಡಳಿತ ಪ್ರದೇಶವು 59146 ಚದರ ಚದರ ಕಿಮೀ ಭೂ ಪ್ರದೇಶವನ್ನು ಹೊಂದಿದ್ದು, ಇಲ್ಲಿ ಲೇಹ್ ಮತ್ತು ಕಾರ್ಗಿಲ್ ಎಂಬ ಎರಡು ಜಿಲ್ಲೆಗಳಿದ್ದು, ಒಟ್ಟು ಜನಸಂಖ್ಯೆ 274289 ಇರುತ್ತದೆ. ಇಲ್ಲಿ ವಿಧಾನಸಭೆಯ ಅಸ್ತಿತ್ವ ಇರುವುದಿಲ್ಲ, ಕೇವಲ ಒಬ್ಬರು ಲೋಕಸಭಾ ಸದಸ್ಯರಿದ್ದು, ಲೇಹ್ ರಾಜಧಾನಿಯಾಗಿರುತ್ತದೆ.
#ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳ ಅಸ್ತಿತ್ವದ ನಂತರ ಉಂಟಾದ ಕೆಲವು ಸಂಗತಿಗಳನ್ನು ಗಮನಿಸೋಣ•••
•••ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವನ್ನು ಘೋಷಣೆ ಮಾಡಿದ ನಂತರ, ಅದರ ಭೂ ಪ್ರದೇಶವನ್ನು ನಿರ್ಧರಿಸಿ ಭೂಪಟ/ನಕ್ಷೆಯನ್ನು ರಚಿಸಲಾಯಿತು. ಹೀಗೆ ಭೂ ಪ್ರದೇಶವನ್ನು ನಿರ್ಧರಿಸುವಾಗ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ Occupied Kashmir ಒಂದು ಭಾಗವಾದ ಆಜಾದ್ ಕಾಶ್ಮೀರ್_Azad Kashmir ಎಂದು ಪಾಕಿಸ್ತಾನದಿಂದ ಕರೆಯಲ್ಪಡುವ ಭೂ ಪ್ರದೇಶವನ್ನು ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ವ್ಯಾಪ್ತಿಗೆ ಸೇರ್ಪಡೆ ಮಾಡಿ ಗಡಿಯನ್ನು ನಿರ್ಧರಿಸಲಾಯಿತು.
•••ಲಡಾಖ್ ಕೇಂದ್ರಾಡಳಿತ ಪ್ರದೇಶವನ್ನು ಘೋಷಣೆ ಮಾಡಿದ ನಂತರ, ಅದರ ಭೂ ಪ್ರದೇಶವನ್ನು ನಿರ್ಧರಿಸಿ ಭೂಪಟ/ನಕ್ಷೆಯನ್ನು ರಚಿಸಲಾಯಿತು. ಹೀಗೆ ಭೂ ಪ್ರದೇಶವನ್ನು ನಿರ್ಧರಿಸುವಾಗ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತೊಂದು ಭಾಗವಾದ ಗಿಲ್ಗಿಟ್-ಬಾಲ್ಟಿಸ್ಥಾನ_ Gilgit-Baltistanವನ್ನು ಲಡಾಖ್ ಕೇಂದ್ರಾಡಳಿತ ಪ್ರದೇಶದ ವ್ಯಾಪ್ತಿಗೆ ಸೇರ್ಪಡೆ ಮಾಡಲಾಯಿತು. ಜೊತೆಗೆ ಚೀನಾದ ಅಧೀನದಲ್ಲಿನ ವಿವಾದಾಸ್ಪದ ಅಕ್ಶಯ್ ಚಿನ್ ಮತ್ತು Shaksgam ಪ್ರದೇಶವನ್ನು ಸೇರಿಸಿ ಗಡಿಯನ್ನು ಗುರುತಿಸಲಾಯಿತು.
•••ಸ್ವಾತಂತ್ರ್ಯ ನಂತರ ಜಮ್ಮು ಮತ್ತು ಕಾಶ್ಮೀರ ರಾಜ್ಯವು ಅನುಭವಿಸಿದಷ್ಟು ಗಡಿ ಸಮಸ್ಯೆಯನ್ನು ದೇಶದ ಬೇರಾವುದೇ ಭಾಗವು ಅನುಭವಿಸಲಿಲ್ಲ. ಈ ಸಮಸ್ಯೆಯ ಮೂಲಧಾತುವಾಗಿರುವ ಪಾಕಿಸ್ತಾನ ಆಕ್ರಮಿತ ಕಾಶ್ಮೀರ_Pakistan Occupied Kashmir_POK ಯನ್ನು ಮರಳಿ ಭಾರತಕ್ಕೆ ಪಡೆಯಲಾಗುವುದು ಎಂಬ ಬಲವಾದ ಕೂಗು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳ ರಚನೆಯ ನಂತರದಲ್ಲಿ ಬಲವಾಗಿ ಕೇಳಿಬರುತ್ತಿದೆ.
#ಯಾವುದೇ ಅಡೆ ತಡೆಗಳಿಲ್ಲದೇ POKದ ಎಲ್ಲ ಭೂ ಭಾಗವು ಭಾರತಕ್ಕೆ ಮರಳಿ ಸೇರಿ ಬಿಟ್ಟರೆ ಅದು ಭಾರತದ ಮಹತ್ವದ ಸಾಧನೆಯಾಗಲಿದೆ. ವಾಸ್ತವದಲ್ಲಿ POKಯನ್ನು ಭಾರತಕ್ಕೆ ಮರಳಿ ಪಡೆಯುವುದು ಅಷ್ಟು ಸರಳವಾಗಿ ನಡೆಯಬಹುದಾದ ಪ್ರಕ್ರಿಯೆಯಂತೆ ಕಾಣುವುದಿಲ್ಲ. POKಯನ್ನು ಭಾರತಕ್ಕೆ ಮರಳಿ ಪಡೆಯಲಾಗುವುದು ಎಂದು ಭಾವನಾತ್ಮಕವಾಗಿ ವಾದ ಮಾಡುವ ಮುನ್ನ POK ಎಂದರೇನು, ಅದರ ವರ್ತಮಾನದ ಪರಿಸ್ಥಿತಿ ಹೇಗಿದೆ ಎಂಬುದರ ಬಗ್ಗೆ ಒಂದಷ್ಟು ತಿಳಿದುಕೊಳ್ಳುವುದು ಆವಶ್ಯಕವಾಗಿದೆ.
ಅಂದರೆ Pakistan Occupied Kashmir ಅಂದರೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ. ಸರಳವಾಗಿ ಭಾರತದ ಒಂದಷ್ಟು ಭೂ ಪ್ರದೇಶವನ್ನು ಪಾಕಿಸ್ತಾನವು ಅನಧಿಕೃತವಾಗಿ ತನ್ನ ದೇಶದಲ್ಲಿ ಸೇರಿಸಿಕೊಂಡಿದೆ ಎನ್ನಬಹುದು.
ನಾವು ಭಾರತೀಯರು ಅದನ್ನು Pok ಎನ್ನುತ್ತೇವೆ.
#ಅವರು, ಅಂದರೆ ಪಾಕಿಸ್ತಾನದವರು ತಮ್ಮದೇ ಜಮ್ಮು ಮತ್ತು ಕಾಶ್ಮೀರದ ಕೆಲವು ಭೂ ಭಾಗಗಳನ್ನು ಭಾರತವು ಅನಧಿಕೃತವಾಗಿ ತನ್ನ ಗಡಿಯಲ್ಲಿ ಸೇರಿಸಿಕೊಂಡಿದೆ ಎಂದು ಹೇಳುತ್ತಾ, ಅದನ್ನು IOK_ India Occupied Kashmir ಎನ್ನುತ್ತಾರೆ.
#ಒಟ್ಟಿನಲ್ಲಿ, ಪಾಕಿಸ್ತಾನವು ಭಾರತದ ಕಡೆ ಕೈ ತೋರಿಸಿ ಗಡಿಯನ್ನು ಆಕ್ರಮಣ ಮಾಡಿರುವವರು ನೀವು ಎನ್ನುತ್ತದೆ.
ನಾವು ಭಾರತೀಯರು ಇಲ್ಲವೇ ಇಲ್ಲ, ನಮ್ಮದೇ ಭೂ ಪ್ರದೇಶವನ್ನು ಅತಿಕ್ರಮಣ ಮಾಡಿ ನಿಮ್ಮ ದೇಶಕ್ಕೆ ಸೇರಿಸಿಕೊಂಡಿದ್ದೀರಿ ಎಂದು ವಾದ ಮಾಡುತ್ತೇವೆ.
ಇದು ಬಗೆಹರಿಯದ ಗಡಿಯ ತಂಟೆ.
್ನು ಅರ್ಥ ಮಾಡಿಕೊಳ್ಳುವ ದೃಷ್ಟಿಯಿಂದ ಅದನ್ನು ಎರಡು ಭಾಗಗಳಾಗಿ ವರ್ಗೀಕರಣ ಮಾಡೋಣ ••••
1. ಆಜಾದ್ ಕಾಶ್ಮೀರ-Azad Kashmir.
2. ಗಿಲ್ಗಿಟ್-ಬಾಲ್ಟಿಸ್ಥಾನ್_ Gilgit-baltistan.
#ಮೊದಲಿಗೆ_ಆಜಾದ್_ಕಾಶ್ಮೀರ್_ಬಗ್ಗೆ•••
#ಸ್ವಾತಂತ್ರ್ಯದ ಸಮಯದಲ್ಲಿ ಕಾಶ್ಮೀರದ ಮಹಾರಾಜನಾಗಿ ಹರಿಸಿಂಗ್ ಇದ್ದರು.
ತಮ್ಮ Princely State ಕಾಶ್ಮೀರವನ್ನು ಪಾಕಿಸ್ತಾನ ಅಥವಾ ಭಾರತಕ್ಕೆ ಸೇರಿಸಿಕೊಳ್ಳಬಹುದು, ಇಲ್ಲವೇ ಸ್ವತಂತ್ರವಾಗಿ Princely state ಆಗಿಯೇ ಇರಬಹುದು ಎಂಬ ಆಯ್ಕೆಯನ್ನು ಬ್ರಿಟಿಷರು ಮಹಾರಾಜ ಹರಿಸಿಂಗ್ ಗೆ ನೀಡುತ್ತಾರೆ. ಮಹಾರಾಜ ಹರಿಸಿಂಗ್ ತಾವು ಸ್ವತಂತ್ರ ರಾಜನಾಗೇ ಇರುವ ಇಚ್ಚೆ ವ್ಯಕ್ತಪಡಿಸುತ್ತಾರೆ. ಇದರ ಪರ ವಿರೋಧ ಪ್ರತಿಭಟನೆಯನ್ನು ಎದುರಿಸಲಾಗದೇ, ತಮ್ಮ Princely state ಕಾಶ್ಮೀರದೊಂದಿಗೆ ಹರಿಸಿಂಗ್ ಭಾರತಕ್ಕೆ ಸೇರುತ್ತಾರೆ. ಇದನ್ನು ಒಪ್ಪದವರು ಗಡಿಯಾಚೆಗಿನ ಪ್ರದೇಶವನ್ನು ಪಾಕಿಸ್ತಾನಕ್ಕೆ ಸೇರಿಸುವಂತೆ ಹೋರಾಟ ಮಾಡಿ, 24 ಅಕ್ಟೋಬರ್ 1947ರಲ್ಲಿ ಹೊಸ ಪ್ರಾಂತ್ಯವೆಂದು ಆಜಾದ್ ಕಾಶ್ಮೀರ್ ಅನ್ನು ಘೋಷಣೆ ಮಾಡಿಕೊಳ್ಳುತ್ತಾರೆ.
#ಹೀಗೆ ಭಾರತ ಮತ್ತು ಪಾಕಿಸ್ತಾನದ ಗಡಿಯ ಸಮಸ್ಯೆ ಉಲ್ಬಣಿಸಿದಾಗ ವಿಶ್ವಸಂಸ್ಥೆಯ ಸಹಯೋಗದಲ್ಲಿ ಕದನ ವಿರಾಮವನ್ನು ಘೋಷಣೆ ಮಾಡಿ, ತಾತ್ಕಾಲಿಕ ಗಡಿಯನ್ನು 1949ರಲ್ಲಿ ಗುರುತಿಸಲಾಯಿತು. ಹೀಗೆ POK ಸೃಷ್ಟಿಯಾಗುತ್ತದೆ. 1972ರ ಸಿಮ್ಲಾ ಒಪ್ಪಂದದ ನಂತರವೂ ಗಡಿಯಲ್ಲಿ ಇದೇ ಪರಿಸ್ಥಿತಿ ಮುಂದುವರೆದಿದೆ.
#ಆಜಾದ್ ಕಾಶ್ಮೀರ್ ಎಂದು ಕರೆಯಲ್ಪಡುವ ಭೂ ಭಾಗವು POKಯ ಒಂದು ಭಾಗವಾಗಿದ್ದು, ಇದನ್ನು Ajad Jammu Kashmir- AJK ಎಂದು ಕರೆಯಲಾಗುತ್ತದೆ. ಈ ಭೂ ಪ್ರದೇಶವು ಭಾರತದ ಜಮ್ಮು ಪ್ರಾಂತ್ಯದ ಪಶ್ಚಿಮದಿಂದ ಆರಂಭವಾಗಿ, ಕಾಶ್ಮೀರ ಪ್ರಾಂತ್ಯದ ಅಂಚಿನವರೆಗೆ ಹಬ್ಬಿದ್ದು, ಇದರ ಒಟ್ಟು ವಿಸ್ತೀರ್ಣವು 13297 [ ಕರ್ನಾಟಕದ ಬೆಳಗಾವಿ ಜಿಲ್ಲೆಯಷ್ಟು ವಿಸ್ತೀರ್ಣ] ಚದರ ಕಿಮೀ ಇದ್ದು, ಇಲ್ಲಿ 40,45,300ಕ್ಕೂ ಮೀರಿದ ಜನಸಂಖ್ಯೆ ಇದೆ. ಇಲ್ಲಿ ಮೂರು ಆಡಳಿತಾತ್ಮಕ ವಿಭಾಗಗಳಿದ್ದು, Mirpur, Kotli, Bhimber, Muzaffarabad, Hattian, Neelam valley, Poonch, Haveli, Bagh, Sudhanoti ಎಂಬ ಒಟ್ಟು ಹತ್ತು ಜಿಲ್ಲೆಗಳಿವೆ. ಮುಜಾಫರಾಬಾದ್ ನಗರವು ರಾಜಧಾನಿಯಾಗಿದ್ದು, Mirpur ನಗರವು ಅತಿದೊಡ್ಡ ನಗರವಾಗಿದೆ.
#ಆಜಾದ್ ಕಾಶ್ಮೀರ್ ಪ್ರಾಂತ್ಯದಲ್ಲಿ ಕಾಶ್ಮೀರಿ ಮುಸ್ಲಿಂ, ಗುಜ್ಜರ್ಸ, ಸುಧಾನ್ಸ್, ಜಾಟ್ಸ್, ರಜಪೂಟ್ಸ್, ಮೊಘಲ್ಸ್, ಅಬ್ಬಾಸಿಸ್ ಎಂಬ ಜನಾಂಗಕ್ಕೆ ಸೇರಿದ ಜನರಿದ್ದು, ಇಡೀ ಪ್ರದೇಶವು ಸಂಪೂರ್ಣವಾಗಿ ಮುಸ್ಲಿಂ ಜನರಿಂದ ಕೂಡಿರುತ್ತದೆ. ಇಲ್ಲಿ ಉರ್ದು ಪ್ರಮುಖ ಭಾಷೆ, ಜೊತೆಗೆ ಪಹಾಡಿ,ಪೊತ್ವಾಡಿ, ಗುಜ್ಜರ್, ಪಾಸ್ಥೋ ಭಾಷೆಗಳನ್ನಾಡುವ ಜನರಿದ್ದಾರೆ.
#ಆಜಾದ್ ಕಾಶ್ಮೀರ ಪ್ರಾಂತ್ಯದಲ್ಲಿ President, Prime minister ರಿದ್ದು, High court ಕೂಡ ಇದೆ. ಪಾಕಿಸ್ತಾನ ಸರ್ಕಾರವು ಈ ಪ್ರಾಂತ್ಯಕ್ಕೆ ಸಂಬಂಧಿಸಿದ ಆಯವ್ಯಯ, ಹಣಕಾಸಿನ ವಿಷಯಗಳನ್ನು ನಿರ್ಧರಿಸುತ್ತದೆ. ಇಲ್ಲಿ ಪ್ರತ್ಯೇಕವಾದ 49ಸದಸ್ಯರ Legislature Assembly ಕೂಡ ಇರುವ ಸರ್ಕಾರವಿದೆ.
#ಆಜಾದ್ ಕಾಶ್ಮೀರ್ ಪ್ರಾಂತ್ಯದಲ್ಲಿ ಎಲ್ಲ ಬಗೆಯ ಶಿಕ್ಷಣ ಸೌಲಭ್ಯವಿದ್ದು, Mirpur, Muzaffarabad, Bhimber, Rawalkot, Poonch ಗಳಲ್ಲಿ ವಿಶ್ವವಿದ್ಯಾಲಯಗಳಿವೆ. Baghನಲ್ಲಿ ಮಹಿಳಾ ವಿಶ್ವವಿದ್ಯಾಲಯವಿದೆ. Mirpur, Muzaffarabadಗಳಲ್ಲಿ ವಿಮಾನ ನಿಲ್ದಾಣಗಳಿದ್ದು, Muzaffarabadನಲ್ಲಿ 1.50ಲಕ್ಷ ಜನರಿದ್ದಾರೆ. Mirpurದಲ್ಲಿ 4.50 ಲಕ್ಷ ಜನರಿದ್ದು, ಅಲ್ಲಿ ಮೆಡಿಕಲ್ ಕಾಲೇಜು ಇದೆ. Mirpur ನಿಂದ ರಾಜಧಾನಿ Muzaffarabadವರೆಗಿನ 230ಕಿಮೀ ದೂರದ ರಸ್ತೆಯು ಪಾಕಿಸ್ತಾನದ ಮೂಲಕವೇ ಸಾಗುತ್ತದೆ. ಇಲ್ಲಿ ಅನೇಕ ಪ್ರೇಕ್ಷಣೀಯ ಸ್ಥಳಗಳಿದ್ದು, ನದಿ ಕಣೆವೆ, ನೈಸರ್ಗಿಕ ಗಿರಿಧಾಮಗಳಿವೆ. ದೇಶ ವಿದೇಶಗಳ ಜನರು ಭೇಟಿಕೊಡುತ್ತಾರೆ.
#ಆಜಾದ್ ಕಾಶ್ಮೀರದ ಈ ಭೂ ಭಾಗವನ್ನು ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶಕ್ಕೆ ಸೇರ್ಪಡೆ ಮಾಡಿ ಭಾರತ ಸರ್ಕಾರವು, ಗಡಿಯನ್ನು ನಿರ್ಧರಿಸಿದೆ.
#ಇನ್ನು_ಎರಡನೆಯದು #ಗಿಲ್ಗಿಟ್- ಬಾಲ್ಟಿಸ್ಥಾನ್_Gilgit-baltistan•••
#ಈ ಪ್ರಾಂತ್ಯವು Pokಯ ಮತ್ತೊಂದು ಭಾಗವಾಗಿದೆ.
ಇದು ಕಾಶ್ಮೀರದ ಉತ್ತರ ಭಾಗದ ಪ್ರಾಂತ್ಯಗಳು, ಪಾಕಿಸ್ತಾನದ Khyber pakhtunkhwaದ ಪೂರ್ವದ ಗಡಿಯುದ್ದಕ್ಕೂ, ಆಚೆಗೆ ಅಫ್ಘಾನಿಸ್ಥಾನದ Wakhan corridor, ಚೀನಾದ ಗಡಿಯವರೆಗೆ, Shaksgam, ಕಾರಾಕೋರಂ, ಸಿಯಾಚಿನ್ ಪ್ರದೇಶವನ್ನು ಒಳಗೊಂಡಿರುವ ವಿಸ್ತಾರವಾದ ಪ್ರದೇಶವಾಗಿದೆ. Gilgit-baltistanದ ಒಟ್ಟು ವಿಸ್ತೀರ್ಣವು 72971 ಚದರ ಕಿಮೀ ಇದ್ದು [ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಹತ್ತು ಪಟ್ಟು ಗಾತ್ರ], ಇಲ್ಲಿ 12,49,000 ಜನಸಂಖ್ಯೆ ಇದೆ. ಆಡಳಿತಾತ್ಮಕವಾಗಿ 03 ವಿಭಾಗಗಳಿದ್ದು, Ghanche, Shigar, Kharmang, Skardu, Roundu, Gilgit, Ghizer, Hunza, Gupis- Yasin, Nagar, Diamer, Astore, Darel, Tangir ಎಂಬ ಹೆಸರಿನ ಒಟ್ಟು14 ಜಿಲ್ಲೆಗಳಿವೆ. Gilgit ನಗರವು ರಾಜಧಾನಿ ಆಗಿದ್ದು ಇಲ್ಲಿ 2,14,000 ಜನಸಂಖ್ಯೆ ಹೊಂದಿದ್ದು, skardu ನಗರವು ದೊಡ್ಡ ನಗರವಾಗಿದೆ.
#ಇಲ್ಲಿ shins, yashkuns, kashmiris, pathans, koshistanisಪಂಗಡಕ್ಕೆ ಸೇರಿದ ಜನರಿದ್ದು, ಪ್ರಮುಖವಾಗಿ ಉರ್ದು ಭಾಷೆಯು ರೂಢಿಯಲ್ಲಿದ್ದು, ಜೊತೆಗೆ shina, Balti, wakhi, khowar ಭಾಷೆ ಮಾತಾಡುವ ಜನರಿದ್ದು, ಇಲ್ಲಿನ ಎಲ್ಲ ಜನರೂ ಮುಸ್ಲಿಮರಾಗಿದ್ದಾರೆ. ಇಲ್ಲಿ ಎಲ್ಲ ಬಗೆಯ ಶೈಕ್ಷಣಿಕ ಸವಲತ್ತುಗಳಿದ್ದು, ಕಾರಾಕೋರಂ international university,
skardu ನಗರದ university of baltistan ಪ್ರಸಿದ್ಧವಾಗಿದ್ದು, Gilgit, skardu ಗಳಲ್ಲಿ ಆಂತರಿಕ ವಿಮಾನ ನಿಲ್ದಾಣಗಳಿವೆ. ಬುದ್ಧನಿಗೆ ಸಂಬಂಧಿಸಿದಂತೆ ಅನೇಕ ಸ್ಥಳಗಳಿವೆ, ಅತ್ಯಂತ ಸುಂದರವಾದ ಕಣಿವೆ, ಗಿರಿಧಾಮಗಳಿವೆ. ಚೀನಾದ ಮಹತ್ವಾಕಾಂಕ್ಷೆಯ ಕಾರಾಕೋರಂ ಹೆದ್ದಾರಿಯು Gilgit-baltistan ಪ್ರದೇಶದಲ್ಲಿ 420ಕಿಮೀಗಳಷ್ಟು ದೂರ ಹಾದು ಹೋಗಿದೆ.
Gilgit ನಿಂದ ಚೀನಾದ Khasgarವರೆಗೆ ಬಸ್ ಸಂಚಾರ ಸೌಲಭ್ಯವಿದೆ.
-baltistanದ ಎಲ್ಲಾ ಭೂ ಭಾಗವನ್ನು ಲಡಾಖ್ ಕೇಂದ್ರಾಡಳಿತ ಪ್ರದೇಶದ ಒಂದು ಭಾಗವಾಗಿ ಭಾರತ ಸರ್ಕಾರವು ಗುರುತಿಸಿ, ಗಡಿಯನ್ನು ನಿರ್ಧಾರ ಮಾಡಿದೆ.
#ಒಟ್ಟಾರೆ POKಯು 86268 ಚದರ ಕಿಮೀ ಭೂ ವಿಸ್ತೀರ್ಣ 52,94,000 ಜನಸಂಖ್ಯೆ ಹೊಂದಿದ್ದು, ಇದನ್ನೆಲ್ಲಾ ಭಾರತದ ವ್ಯಾಪ್ತಿಗೆ ಮರಳಿ ತರುವ ಬಗ್ಗೆ ಪ್ರಬಲವಾದ ಮಾತುಗಳು ಕೇಳಿ ಬರುತ್ತಿವೆ. POKದ ಎರಡು ಭಾಗಗಳಾದ ಆಜಾದ್ ಕಾಶ್ಮೀರ್ ಮತ್ತು ಗಿಲ್ಗಿಟ್ ಬಾಲ್ಟಿಸ್ಥಾನದ ಎಲ್ಲಾ ಪ್ರದೇಶಗಳನ್ನು ಭಾರತದ ಗಡಿಯೊಳಗೆ ಸೇರ್ಪಡೆ ಮಾಡಿರುವ ನಕ್ಷೆಯನ್ನು ಭಾರತ ಸರ್ಕಾರ ಜಾರಿಗೊಳಿಸಿ, ಆ ಪ್ರದೇಶದ ಹವಾಮಾನ ವರದಿಯನ್ನು ಕೂಡ ಬಿತ್ತರಿಸುತ್ತಿದೆ. ದೇಶದ ಏಕತೆ ಸಮಗ್ರತೆಯ ದೃಷ್ಟಿಯಿಂದ POKಯನ್ನು ಮರಳಿ ಪಡೆಯುವ ಬಗ್ಗೆ ಭಾರತ ಸರ್ಕಾರದ ನಿಲುವು ಸಮರ್ಥನೀಯ.
#ಆದರೆ, ವಾಸ್ತವಿಕ ನೆಲೆಗಟ್ಟಿನಲ್ಲಿ ಕೆಲವು ಪ್ರಶ್ನೆಗಳಿಗೆ ಉತ್ತರವನ್ನು ಕಂಡು ಕೊಳ್ಳಬೇಕಿದೆ••••
1. ಎರಡು ಭಾಗಗಳಾದ ಆಜಾದ್ ಕಾಶ್ಮೀರ್ ಮತ್ತು ಗಿಲ್ಗಿಟ್ ಬಾಲ್ಟಿಸ್ಥಾನವನ್ನು ಇಡಿಯಾಗಿ ಭಾರತಕ್ಕೆ ಮರಳಿ ಪಡೆದುಕೊಂಡಾಗ ಮಾತ್ರ ಪಾಕಿಸ್ತಾನವು ತನ್ನ ವಶದಲ್ಲಿ ಅಕ್ರಮವಾಗಿ ಇರಿಸಿಕೊಂಡಿರುವ POKಯನ್ನು ಮರಳಿ ಪಡೆದಂತಾಗುತ್ತದೆ.
ಸರಳವಾಗಿ, POKನ ಒಂದು ಭಾಗವಾದ ಆಜಾದ್ ಕಾಶ್ಮೀರವನ್ನು ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶಕ್ಕೆ ಮತ್ತು POKನ ಇನ್ನೊಂದು ಭಾಗವಾದ ಗಿಲ್ಗಿಟ್- ಬಾಲ್ಟಿಸ್ಥಾನವನ್ನು ಲಡಾಖ್ ಕೇಂದ್ರಾಡಳಿತ ಪ್ರದೇಶಕ್ಕೆ ಮರಳಿ ಪಡೆದರೆ ಮಾತ್ರ ಈ ಪ್ರಕ್ರಿಯೆ ಮುಗಿಯುತ್ತದೆ.
#ಆದರೆ ಹೇಗೆ..?
ಆಜಾದ್ ಕಾಶ್ಮೀರ್ ಮತ್ತು ಗಿಲ್ಗಿಟ್ ಬಾಲ್ಟಿಸ್ಥಾನ್ ಪ್ರಾಂತ್ಯಗಳ 86268 ಕಿಮೀ ಚದರ ಭೂ ಪ್ರದೇಶವನ್ನು ಮಾತ್ರವೇ ಭಾರತಕ್ಕೆ ಮರಳಿ ಪಡೆಯಲು ಸಾಧ್ಯವಿಲ್ಲ. ಜೊತೆಗೆ ಅಲ್ಲಿನ 52ಲಕ್ಷ ಜನರು, ಅವರ ಧರ್ಮ, ಭಾಷೆ, ಸಂಸ್ಕೃತಿ, ನಗರಗಳು, ರಸ್ತೆಗಳು, ಶಾಲಾಕಾಲೇಜುಗಳು, ವಿಮಾನ ನಿಲ್ದಾಣಗಳು, ಮುಖ್ಯವಾಗಿ ಅಲ್ಲಿನ ಎಲ್ಲಾ ಜ್ವಲಂತ ಸಮಸ್ಯೆಗಳನ್ನೂ ಭಾರತಕ್ಕೆ ಮರಳಿ ಪಡೆದುಕೊಳ್ಳಬೇಕು.
2. ಎಲ್ಲಾ ಭೂ ಪ್ರದೇಶವನ್ನು ಹೇಗೆ ಮರಳಿ ಪಡೆಯುವುದು..? ಪಾಕಿಸ್ತಾನದ ಜೊತೆಗೆ ಮಾತುಕತೆ, ಸಂಧಾನದ ಮೂಲಕವೋ ಅಥವಾ ನೇರವಾಗಿ ಯುಧ್ಧ ಮಾಡುವ ಮೂಲಕವೋ ಎಂಬುದು ನಿರ್ಧಾರವಾಗಬೇಕಿದೆ.
3. #ಒಂದು ವೇಳೆ POKಯಲ್ಲಿರುವ ಎಲ್ಲಾ ಪ್ರದೇಶಗಳ ಜೊತೆಗೆ ಅಲ್ಲಿನ ಸುಮಾರು 52ಲಕ್ಷ ಜನರನ್ನು ಭಾರತಕ್ಕೆ ಮರಳಿ ಪಡೆದರೆ ಜಮ್ಮು-ಕಾಶ್ಮೀರ ಭಾಗದಲ್ಲಿ ಭಯೋತ್ಪಾದನೆ ಸ್ಫೋಟವಾಗದ ಬಗ್ಗೆ ಆಲೋಚಿಸಬೇಕು.
ಈಗಿರುವ ಸಮಸ್ಯೆಗಳ ಜೊತೆಗೆ ಮತ್ತಷ್ಟು ಸೇರಿಕೊಂಡರೆ ಶಾಂತಿ ಸ್ಥಾಪನೆ ಕಠಿಣವಾಗಬಹುದು.
4. ್ರದೇಶದಲ್ಲಿರುವ ಜನರು ಭಾರತಕ್ಕೆ ಮರಳಿ ಬರುವುದಿಲ್ಲ ಅಥವಾ ಸೇರ್ಪಡೆ ಆಗುವುದಿಲ್ಲವೆಂದು ಹಟ ಹಿಡಿದರೆ ಆಂತರಿಕ ಕಲಹ ಸೃಷ್ಟಿಯಾಗದ ಹಾಗೆ ನಿಗಾ ವಹಿಸಬೇಕು. ಇದಕ್ಕೆ ದೃಢವಾದ ಪರಿಹಾರಗಳು ಸಿದ್ದವಿರಬೇಕು.
#5.ಚೀನಾದ Xinjiang ಪ್ರಾಂತ್ಯದ Khasgarನಿಂದ ಆರಂಭವಾಗುವ 1300ಕಿಮೀ ದೂರದ ಕಾರಾಕೋರಂ ಹೆದ್ದಾರಿಯು ಪಾಕಿಸ್ತಾನದ Hasan Abdal ಎನ್ನುವಲ್ಲಿ ಮುಕ್ತಾಯವಾಗಿ, ಮುಂದೆ ಇಸ್ಲಾಮಾಬಾದ್ ಕಡೆಗೆ ಸಂಪರ್ಕ ಕಲ್ಪಿಸುತ್ತದೆ. China Pakistan friendship highway ಎಂದು ಕರೆಯುವ ಈ ಹೆದ್ದಾರಿ ಗಿಲ್ಗಿಟ್ ಬಾಲ್ಟಿಸ್ಥಾನ ಪ್ರದೇಶದ ಮೂಲಕ 420ಕಿಮೀ ಹಾದು ಹೋಗಿದೆ. ಅಪಾರ ಹಣವನ್ನು ವ್ಯಯ ಮಾಡಿ, ಭವಿಷ್ಯದ ಬೇರೆ ಬೇರೆ ಉದ್ದೇಶಗಳಿಗಾಗಿ ಈ ಹೆದ್ದಾರಿಯನ್ನು ಚೀನಾವು ನಿರ್ಮಿಸಿದೆ. ಒಂದು ವೇಳೆ ಗಿಲ್ಗಿಟ್ ಬಾಲ್ಟಿಸ್ಥಾನ್ ಪ್ರದೇಶವು ಲಡಾಖ್ ಕೇಂದ್ರಾಡಳಿತ ಪ್ರದೇಶಕ್ಕೆ ಮರಳಿ ಬಂದರೆ, ಕಾರಾಕೋರಂ ಹೆದ್ದಾರಿಯೂ ಸಹಜವಾಗಿ ಭಾರತದ ಗಡಿಯಲ್ಲಿ ಸೇರುತ್ತದೆ. ಈ ಸಂದರ್ಭದಲ್ಲಿ ಪಾಕಿಸ್ತಾನ ಮತ್ತು ಚೀನಾ ಖಚಿತವಾಗಿಯೂ ಸಿಡಿದೇಳುತ್ತವೆ.
ಇದಕ್ಕೆ ಪರಿಹಾರಗಳು ಭಾರತದ ಕಡೆ ಸಿದ್ದವಿರಬೇಕು.
#6.China Pakistan Economic Corridor_CPEC ಯೋಜನೆ•••
2013ರಲ್ಲಿ ಆರಂಭವಾದ ಈ ಯೋಜನೆಯು ಚೀನಾ ಮತ್ತು ಪಾಕಿಸ್ತಾನಗಳ ನಡುವಿನ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ.
ಪಾಕಿಸ್ತಾನದಾದ್ಯಂತ infrastructure, special economic zones, energy projects, highways, railways, science and technology, agriculture, naval base ಹೀಗೆ ಅನೇಕ ಅಭಿವೃದ್ಧಿ ಕೆಲಸಗಳನ್ನು ಒಳಗೊಂಡ ಯೋಜನೆಯಾಗಿದೆ. Khyber pakhtunkhwa, Gilgit baltistan, Punjab Province, Sindh, Azad Kashmir ಭಾಗಗಳಲ್ಲಿ, ಜೊತೆಗೆ ಚೀನಾದ Xinjiangಗಳಲ್ಲಿ SEZಗಳನ್ನು ಸ್ಥಾಪನೆ ಮಾಡಲು ಸ್ಥಳಗಳನ್ನು ಗುರುತಿಸಲಾಗಿದೆ. ಅಲ್ಲದೇ, ಕರಾಚಿ, ಲಾಹೋರ್,ರಾವಲ್ಪಿಂಡಿ, ಪೇಶಾವರ್ ಗಳ ನಡುವೆ ರೈಲು ಮಾರ್ಗಗಳ ಸ್ಥಾಪನೆಗೆ 62 ಬಿಲಿಯನ್ ಡಾಲರ್ ಹಣವನ್ನು China development bankನಿಂದ ಹಣವನ್ನು ತಂದು ಚೀನಾವು ಸುರಿದಿದೆ.
ಅಲ್ಲದೇ, ಪಾಕಿಸ್ತಾನದ ಬಂದರು ನಗರಿ Gwadarವರೆಗೆ ಹೆದ್ದಾರಿ ನಿರ್ಮಾಣ ಮಾಡಿ, Gwadar ಬಂದರನ್ನು ಅಭಿವೃದ್ಧಿ ಪಡಿಸಿದೆ. ಮುಂದೆ ಇರಾನ್, ಪಶ್ಚಿಮ ಏಷ್ಯಾ, ಆಫ್ರಿಕಾ ಖಂಡದ ದೇಶಗಳಲ್ಲಿ ವ್ಯಾಪಾರವನ್ನು ವಿಸ್ತರಿಸುವ ಆಕಾಂಕ್ಷೆ ಚೀನಾ ದೇಶಕ್ಕಿದೆ. ಇದರ ಆಧಾರ ಸ್ಥಂಭವೇ ಕಾರಾಕೋರಂ ಹೆದ್ದಾರಿ. ಗಿಲ್ಗಿಟ್ ಬಾಲ್ಟಿಸ್ಥಾನ್ ಪ್ರದೇಶದಲ್ಲಿ ಈ ಹೆದ್ದಾರಿಯು 420ಕಿಮೀ ಹಾದು ಹೋಗಿದೆ.
ಗಿಲ್ಗಿಟ್ ಬಾಲ್ಟಿಸ್ಥಾನ್ ಪ್ರದೇಶವು ಭಾರತದ ಲಡಾಖ್ ಕೇಂದ್ರಾಡಳಿತ ಪ್ರದೇಶಕ್ಕೆ ಮರಳಿ ಸೇರಿದರೆ, ಚೀನಾ ಮತ್ತು ಪಾಕಿಸ್ತಾನಗಳ ನಡುವಿನ CPECಯೋಜನೆಗೆ ದೊಡ್ಡ ಹೊಡೆತ ಬೀಳಲಿದೆ. ಇದನ್ನೆಲ್ಲಾ ನೋಡಿಕೊಂಡು ಚೀನಾ ಮತ್ತು ಪಾಕಿಸ್ತಾನ ಸುಮ್ಮನೆ ಕೂರುತ್ತವೆ ಎಂದು ಭಾವಿಸುವಂತಿಲ್ಲ.
#7.ಲಡಾಖ್ ಕೇಂದ್ರಾಡಳಿತ ಪ್ರದೇಶವಾದ ನಂತರ ಆ ಪ್ರದೇಶದಲ್ಲಿನ ಅಭಿವೃದ್ಧಿ ಚಟುವಟಿಕೆಗಳು ಚೀನಾವನ್ನು ಕಂಗೆಡಿಸಿವೆ. ಲಡಾಖ್ ಕೇಂದ್ರಾಡಳಿತ ಪ್ರದೇಶವನ್ನು ಘೋಷಣೆ ಮಾಡಿದ ನಂತರ ಚೀನಾದ ವಶದಲ್ಲಿರುವ #ಅಕ್ಶಯ್ ಚಿನ್_Aksai chin ಮತ್ತು ಭೂ ಭಾಗಗಳನ್ನು ತನ್ನ ದೇಶದ ಅಧಿಕೃತ ಭೂ ಭಾಗಗಳೆಂದು ಭಾರತವು ಗಡಿಯನ್ನು ಗುರುತಿಸಿ ಪ್ರಕಟಿಸಿದೆ.
•••ಅಕ್ಶಯ್ ಚಿನ್ ಪ್ರದೇಶವು 38,000 ಚದರ ಕಿಮೀ ವಿಸ್ತೀರ್ಣ ಹೊಂದಿದ್ದು, ಇಡೀ ಪ್ರದೇಶವೆಲ್ಲವೂ 1962ರ ಒಪ್ಪಂದದನ್ವಯ ತನ್ನ Xinjiang and Tibet autonomousನ ಭೂ ಭಾಗವೆಂದು ಚೀನಾ ಅಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿದೆ. ಅಲ್ಲದೇ Khasgarನಿಂದ Tibet ನ Lhasa ತಲುಪುವ China NH G-219 ಹೆದ್ದಾರಿಯನ್ನು ಚೀನಾ ಅಕ್ಶಯ್ ಚಿನ್ ನಲ್ಲಿ ನಿರ್ಮಿಸಿದೆ.
•••ಇದರ ಜೊತೆಗೆ,1963 ರವರೆಗೂ POKದ ಗಿಲ್ಗಿಟ್ ಬಾಲ್ಟಿಸ್ಥಾನದ ಭೂ ಭಾಗವಾಗಿದ್ದ 1990 ಚದರ ಕಿಮೀ ವಿಸ್ತೀರ್ಣದ Shaksgam ಪ್ರದೇಶವನ್ನು ಪಾಕಿಸ್ತಾನವು ಚೀನಾಕ್ಕೆ ಉಡುಗೊರೆ ನೀಡಿದ್ದು,
ಈ ಪ್ರದೇಶವೂ ಸಹ Xinjiang ಪ್ರಾಂತ್ಯದ ಒಂದು ಭೂ ಭಾಗವಾಗಿದೆ.
ಗಿಲ್ಗಿಟ್ ಬಾಲ್ಟಿಸ್ಥಾನ್ ಎಲ್ಲ ಪ್ರದೇಶವೂ ಮರಳಿ ಭಾರತಕ್ಕೆ ಬರುವುದಾದರೆ Shaksgam ಪ್ರದೇಶವನ್ನು ಚೀನಾ ಸುಲಭವಾಗಿ ಬಿಟ್ಟು ಕೊಡ ಬೇಕಾಗುತ್ತದೆ. ಇದೆಲ್ಲಾ ನಡೆಯುವುದಿಲ್ಲ ಎಂಬುದಕ್ಕೆ ಮುನ್ಸೂಚನೆಗಳು ಈಗಾಗಲೇ ಲಡಾಖಿನ ಗಾಲ್ವನ್ ವ್ಯಾಲಿಯಲ್ಲಿ ಕಾಣುತ್ತಿವೆ.
#ಇವೆಲ್ಲವೂ ಮೇಲ್ನೋಟಕ್ಕೆ ಕಂಡು ಬರುತ್ತಿರುವ ಪ್ರಶ್ನೆಗಳು.
ಒಂದು ವೇಳೆ ಭಾರತ ಸರ್ಕಾರವು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಎಲ್ಲಾ ಭಾಗಗಳನ್ನು ಮರಳಿ ಪಡೆದೇ ತೀರುವ ತೀರ್ಮಾನಕ್ಕೆ ಬಂದಾಗ ಏನೆಲ್ಲ ಸಮಸ್ಯೆಗಳು ಭವಿಷ್ಯದಲ್ಲಿ ಸೃಷ್ಟಿಯಾಗಲಿವೆ ಎಂದು ಈಗಲೇ ಕಲ್ಪಿಸುವುದು ಕಷ್ಟ.....
#ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು
ಮರಳಿ ಪಡೆಯಲು ಒಂದು ದೊಡ್ಡ ಸಾಹಸವೇ ನಡೆಯಬೇಕಿದೆ. ಇದರಲ್ಲಿ ಯಾವುದೇ ಅನುಮಾನವೇ ಇಲ್ಲ. ಇದು ಅಷ್ಟು ಸುಲಭವಾಗಿ ಕಾರ್ಯಸಾಧುವಲ್ಲ.
ಇದಕ್ಕೆ ಬಹಳ ಪರಿಶ್ರಮ, ಮಿತ್ರ ದೇಶಗಳ ಸಹಕಾರ ಎಲ್ಲವೂ ಬೇಕಾಗುತ್ತದೆ. ಅನೇಕ ರಾಷ್ಟ್ರಗಳ ಸಹಕಾರ ಸಿಗದೇ ಹೋಗಬಹುದು. ವಿಶ್ವಸಂಸ್ಥೆಯ ಪಾತ್ರವೂ ಪ್ರಮುಖವಾಗಲಿದೆ.
#ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಮರಳಿ ಪಡೆಯಲಾಗುವುದು ಎಂಬುದು ಕೇವಲ ಪ್ರಚಾರದ ಸರಕಾಗದಿರಲಿ......
••••••••••••