GPIER

GPIER GPIER THEATRE GROUP - MYSORE Since:1994

ಜಿ.ಪಿ.ಐ.ಇ.ಆರ್. ರಂಗ ತಂಡ: 1994ರಲ್ಲಿ ಸ್ಥಾಪನೆಗೊಂಡ ಜಿ.ಪಿ.ಐ.ಇ.ಆರ್. ಮೈಸೂರಿನ ಹೆಸರಾಂತ ಹವ್ಯಾಸಿ ರಂಗ ತಂಡ. ಇದುವರೆಗೆ ಐವತ್ತಕ್ಕೂ ಹೆಚ್ಚು ನಾಟಕಗಳನ್ನು ಸಿದ್ಧಪಡಿಸಿ ಕರ್ನಾಟಕದಾದ್ಯಂತ ಪ್ರದರ್ಶನ ನೀಡಿರುವ ಈ ತಂಡ ತನ್ನ ಗುಣಮಟ್ಟದ ಪ್ರಯೋಗಗಳಿಗೆ ಹೆಸರಾಗಿದೆ. ಅನೇಕ ಪ್ರಶಸ್ತಿ, ಬಹುಮಾನಗಳನ್ನು ಪಡೆದುಕೊಂಡಿರುವ ಜಿ.ಪಿ.ಐ.ಇ.ಆರ್. ತನ್ನ ಮೂಲಭೂತ ಕಳಕಳಿಯಾದ ಮಾನವೀಯತೆ, ಸಾಮಾಜಿಕ ಜಾಗೃತಿ, ಪರಿಸರ ಕಾಳಜಿ ಮುಂತಾದ ಜನಪರ ಮೌಲ್ಯಗಳಿಗೆ ಬದ್ಧವಾಗಿದೆ. ಈಗಾಗಲೇ ನೂರಾರು ರಂಗಕರ್ಮಿಗಳನ್ನು ಬ

ೆಳೆಸಿ ಕನ್ನಡ ರಂಗಭೂಮಿ, ಹಿರಿತೆರೆ, ಕಿರಿತೆರೆಗಳಿಗೆ ಕೊಡುಗೆಯಾಗಿ ನೀಡಿರುವ ಜಿ.ಪಿ.ಐ.ಇ.ಆರ್. ಮೈಸೂರಿನ ರಂಗಾಯಣದ ಹಿರಿಯ ಕಲಾವಿದ ಮೈಮ್ ರಮೇಶ್‍ರವರ ಸಾರಥ್ಯದಲ್ಲಿ ಮುನ್ನಡೆಯುತ್ತಿದೆ.
ನಾಟಕ ಪ್ರದರ್ಶನಗಳ ಜೊತೆಗೆ ಪುಸ್ತಕ ಬಿಡುಗಡೆ, ವಿಚಾರ ಸಂಕಿರಣ, ವಿದ್ಯಾರ್ಥಿಗಳಿಗೆ ರಂಗತರಬೇತಿ ಶಿಬಿರ, ಪ್ರಸಕ್ತ ವಿದ್ಯಮಾನಗಳ ಕುರಿತುಚರ್ಚೆ, ವೈಜ್ಞಾನಿಕ, ವೈಚಾರಿಕ ಗೋಷ್ಠಿಗಳ ಜೊತೆಗೆ ಸಾಹಿತ್ಯಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ. ಹೀಗೆ ಸೃಜನಶೀಲ ಚಟುವಟಿಕೆಗಳಿಂದ ಜನರನ್ನು ರಂಜಿಸುತ್ತಾ, ಮನರಂಜನೆಯ ಜೊತೆಗೆ ರಂಗಭೂಮಿಯೆಡೆಗೆ ಹೊಸ ಪ್ರೇಕ್ಷಕ ವರ್ಗವನ್ನು ಕರೆತರುವುದು ಜಿ.ಪಿ.ಐ.ಇ.ಆರ್. ರಂಗ ತಂಡದ ಮುಖ್ಯಉದ್ದೇಶ.

ನಿರ್ದೇಶಕರ ಬಗ್ಗೆ:
ಮೈಮ್ ರಮೇಶ್ : ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನವರಾದ ಇವರು ಕಳೆದ ನಲವತ್ತ ಎಂಟು ವರ್ಷಗಳಿಂದ ರಂಗಭೂಮಿಗಳಲ್ಲಿ ನಟ, ನಿರ್ದೇಶಕ, ಸಂಘಟಕರಾಗಿ ಸೇವೆ ಸಲ್ಲಿಸಿದ್ದಾರೆ. ಭಾರತದ ಶ್ರೇಷ್ಠ ನಿರ್ದೇಶಕರೊಡನೆ ಕೆಲಸ ಮಾಡಿದ ಅನುಭವ. ಪಶ್ಚಿಮ ಬಂಗಾಲದ ಬಾದಲ್ ಸರ್ಕಾರ್ ಅವರೊಡನೆ ಮೂರನೇ ರಂಗಭೂಮಿಯಲ್ಲಿ ದುಡಿದ ಅನುಭವ. ಅಚಿಟನ್ ಚೆಕಾವ್, ಚೆರ್ರಿ ತೋಟ, ಶೇಕ್ಸ್‍ಪಿಯರ್‍ನ ‘ಕಿಂಗ್ ಲಿಯರ್’, ಗಿರೀಶ್ ಕಾರ್ನಾಡರ ‘ನಾಗಮಂಡಲ’ ಇವುಗಳನ್ನು ತುಳು ಭಾಷೆಗೆ ಅನುವಾದ ಮಾಡಿದ್ದಾರೆ. 1989ರಲ್ಲಿ ಬಿ.ವಿ.ಕಾರಂತರ ನೇತೃತ್ವದ ರಂಗಾಯಣಕ್ಕೆ ಕಲಾವಿದರಾಗಿ ಸಏರ್ಪಡೆ. ಮೂಕಾಭಿನಯದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಿ ಭಾರತದ ಶ್ರೇಷ್ಠ ಮೂಕಾಭಿನಯ ಪಟು ಎಂದೆನಿಸಿಕೊಂಡು ಇವರು ರಂಗಾಯಣದೊಂದಿಗೆ ಅಮೆರಿಕಾ, ಜರ್ಮನ್, ಆಸ್ಟ್ರಿಯ ಪ್ರವಾಸವನ್ನು ಮಾಡಿದ್ದಾರೆ. ಮಕ್ಕಳ ರಂಗಭೂಮಿಯಲ್ಲಿ 30 ವರ್ಷದ ಅನುಭವ ಹೊಂದಿರುವ ಮೈಮ್ ರಮೇಶ್ ರಂಗಾಯಣದ ಮಕ್ಕಳ ರಂಗಭೂಮಿಯ ಯೋಜನೆಯಡಿ ಸ್ವೀಡನ್ ಮತ್ತು ಫ್ರಾನ್ಸ್ ದೇಶದಲ್ಲಿ ನಡೆದ ಮಕ್ಕಳ ರಂಗಭೂಮಿಯ ಕಾರ್ಯಾಗಾರದಲ್ಲಿ ಭಾಗವಹಿಸಿದ್ದಾರೆ. ಇವರ ರಂಗಕಾರ್ಯ ವೈಕರಿಯನ್ನು ಗುರುತಿಸಿ ಕಾಸರಗೋಡಿನ ಗಡಿನಾಡ ಕಲಾವಿದರು ಶಿವರಾಂ ಕಾರಂತರಿಂದ ರಂಗಕರ್ಮಿ ಎಂಬ ಬಿರುದನ್ನು ಹಾಗು ದಕ್ಷಿಣ ಭಾರತದ ಚಲನಚಿತ್ರ ಕಲಾವಿದರು ಚೆನ್ನೈ ಇವರಿಗೆ ದ ‘ಕಲೈಸೆಲ್ವಮ್’ ಎಂಬ ಬಿರುದು ಪಡೆದ ಏಕೈಕ ಕನ್ನಡಿಗ ಹಿರಿಮೆ ಇವರದು. ರಂಗಾಯಣದಲ್ಲಿ 2001 ರಿಂದ ಪ್ರಾರಂಭಗೊಂಡ ಭಾರತೀಯ ರಂಗಶಿಕ್ಷಣ ಕೇಂದ್ರಕ್ಕೆ ಎರಡು ವರ್ಷ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಚಿಕ್ಕಂದಿನಿಂದಲೇ ಯಕ್ಷಗಾನ ಕಲಿತ ಇವರು ಶಾಸ್ತ್ರೀಯ ನೃತ್ಯದಲ್ಲೂ ಭಾರತದ ನೃತ್ಯ ಪ್ರಕಾರಗಳಲ್ಲಿ ರಿಣತಿ ಪಡೆದ ಇವರು ಒಬ್ಬ ಶ್ರೇಷ್ಠ ನೃತ್ಯ ಸಂಯೋಜಕರಾಗಿದ್ದಾರೆ. ರಂಗಭೂಮಿಯಲ್ಲಿ ಎಲ್ಲಾ ಪ್ರಕಾರಗಳಲ್ಲೂ ಸಾಧನೆಯನ್ನು ಮಾಡುತ್ತಾ ಬಂದ ಇವರು ಒಬ್ಬ ಸೃಜನಶೀಲ ವ್ಯಕ್ತಿ. ನಾಟಕ ವಿಭಾಗದಲ್ಲಿ ನಮ್ಮ ನಾಡಿನ ಹೆಮ್ಮೆಯ ದೂರದರ್ಶನ “ಚಂದನ ಪ್ರಶಸ್ತಿ-2016”, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ-2017, ಝೀ ಕನ್ನಡದ ಹೆಮ್ಮೆಯ ಕನ್ನಡಿಗ ಪ್ರಶಸ್ತಿ ಹಾಗೂ ಇನ್ನೂ ಹಲವಾರು ಪ್ರಶಸ್ತಿಗಳು ಮೈಮ್ ರಮೇಶ್‍ರವರಿಗೆ ಪ್ರಧಾನವಾಗಿದೆ.

ಇದೇ ಫೆ 27 ಕ್ಕೆ ರಾಷ್ಟ್ರಾದ್ಯಂತ ನಿಮ್ಮನ್ನು ರಂಜಿಸಲು ನಮ್ಮ ಗುರುಗಳಾದ ಮೈಮ್ ರಮೇಶ್ Mime Ramesh ಅವರು ಬೆಳ್ಳಿ ತೆರೆಯ ಮೇಲೆ ಬರುತ್ತಿದ್ದಾರೆ...
25/02/2026

ಇದೇ ಫೆ 27 ಕ್ಕೆ ರಾಷ್ಟ್ರಾದ್ಯಂತ ನಿಮ್ಮನ್ನು ರಂಜಿಸಲು ನಮ್ಮ ಗುರುಗಳಾದ ಮೈಮ್ ರಮೇಶ್ Mime Ramesh ಅವರು ಬೆಳ್ಳಿ ತೆರೆಯ ಮೇಲೆ ಬರುತ್ತಿದ್ದಾರೆ . 😊

fans

ಗುರುಗಳಾದ ಮೈಮ್ ರಮೇಶ್ Mime Ramesh ಅವರ ಮಾರ್ಗದರ್ಶನದಲ್ಲಿ ನಮ್ಮ ಜಿ ಪಿ ಐ ಇ ಆರ್ ರಂಗತಂಡದ ಮುಂದಿನ ಪ್ರಯೋಗ‘ಸಂತ್ಯಾಗ ನಿಂತಾನ ಕಬೀರ’ಹಿಂದಿ ಮ...
23/02/2026

ಗುರುಗಳಾದ ಮೈಮ್ ರಮೇಶ್ Mime Ramesh ಅವರ ಮಾರ್ಗದರ್ಶನದಲ್ಲಿ ನಮ್ಮ ಜಿ ಪಿ ಐ ಇ ಆರ್ ರಂಗತಂಡದ ಮುಂದಿನ ಪ್ರಯೋಗ

‘ಸಂತ್ಯಾಗ ನಿಂತಾನ ಕಬೀರ’

ಹಿಂದಿ ಮೂಲ: ಭೀಷ್ಮ ಸಹಾನಿ
ಕನ್ನಡ ನಾಟಕ ರೂಪ: ಗೋಪಾಲ ವಾಜಪೇಯಿ
ವಿನ್ಯಾಸ ಮತ್ತು ನಿರ್ದೇಶನ: ಎಂ.ಪಿ.ಹರಿದತ್ತ ಅರಮನೆನಗರಿ Haridatta Mp

ನಿರೀಕ್ಷಿಸಿ…

fans

ಇಂದು ಸಂಜೆ 6:30ಕ್ಕೆ ಮೈಸೂರು ಕಲಾಮಂದಿರ ಆವರಣದ ಕಿರು ರಂಗಮಂದಿರದಲ್ಲಿ…ಜಿ.ಪಿ.ಐ.ಇ.ಆರ್ ರಂಗತಂಡ ಮೈಸೂರು ಅಭಿನಯಿಸುವ ಜಾನಪದ ನಾಟಕ“ಮಂಟೇಸ್ವಾಮಿ ...
25/01/2026

ಇಂದು ಸಂಜೆ 6:30ಕ್ಕೆ ಮೈಸೂರು ಕಲಾಮಂದಿರ ಆವರಣದ ಕಿರು ರಂಗಮಂದಿರದಲ್ಲಿ…

ಜಿ.ಪಿ.ಐ.ಇ.ಆರ್ ರಂಗತಂಡ ಮೈಸೂರು ಅಭಿನಯಿಸುವ ಜಾನಪದ ನಾಟಕ

“ಮಂಟೇಸ್ವಾಮಿ ಕಥಾ ಪ್ರಸಂಗ”

ರಚನೆ: ಡಾ.ಹೆಚ್.ಎಸ್.ಶಿವಪ್ರಕಾಶ್
ಸಂಗೀತ: ದೇವಾನಂದ ವಾರಪ್ರಸಾದ್, ಅರುಣ್ ಎಂ ಸಿ
ನೃತ್ಯ ಸಂಯೋಜನೆ,ವಿನ್ಯಾಸ ಮತ್ತು ನಿರ್ದೇಶನ: ಮೈಮ್ ರಮೇಶ್ ರಂಗಾಯಣ

ಟಿಕೇಟು ದರ: 100/-
ಹೆಚ್ಚಿನ ಮಾಹಿತಿಗೆ: 95383 56252, 95358 77695
fans

ಪ್ರೇಕ್ಷಕರ ಒತ್ತಾಯದ ಮೇರೆಗೆ….ನಿಮ್ಮ ಜಿ.ಪಿ.ಐ.ಇ.ಆರ್ ರಂಗತಂಡ ಮೈಸೂರು ಅಭಿನಯಿಸುವ ಜಾನಪದ ನಾಟಕ“ಮಂಟೇಸ್ವಾಮಿ ಕಥಾ ಪ್ರಸಂಗ” ರಚನೆ: ಡಾ.ಹೆಚ್.ಎಸ...
10/01/2026

ಪ್ರೇಕ್ಷಕರ ಒತ್ತಾಯದ ಮೇರೆಗೆ….ನಿಮ್ಮ ಜಿ.ಪಿ.ಐ.ಇ.ಆರ್ ರಂಗತಂಡ ಮೈಸೂರು ಅಭಿನಯಿಸುವ ಜಾನಪದ ನಾಟಕ

“ಮಂಟೇಸ್ವಾಮಿ ಕಥಾ ಪ್ರಸಂಗ”

ರಚನೆ: ಡಾ.ಹೆಚ್.ಎಸ್.ಶಿವಪ್ರಕಾಶ್
ಸಂಗೀತ: ದೇವಾನಂದ ವಾರಪ್ರಸಾದ್, ಅರುಣ್ ಎಂ ಸಿ
ನೃತ್ಯ ಸಂಯೋಜನೆ,ವಿನ್ಯಾಸ ಮತ್ತು ನಿರ್ದೇಶನ: ಮೈಮ್ ರಮೇಶ್ ರಂಗಾಯಣ

ದಿನಾಂಕ: 25-01-2026 ಭಾನುವಾರ
ಸಮಯ: ಸಂಜೆ 6.30ಕ್ಕೆ
ಸ್ಥಳ: ಕಿರುರಂಗಮಂದಿರ, ಕಲಾಮಂದಿರ ಆವರಣ ಮೈಸೂರು

ಟಿಕೇಟು ದರ: 100/-
ಹೆಚ್ಚಿನ ಮಾಹಿತಿಗೆ: 95383 56252, 95358 77695
fans

Happy New Year 2026😊 fans
31/12/2025

Happy New Year 2026😊

fans

ಇದೇ 21-12-2025 ಭಾನುವಾರ , ಮಳವಳ್ಳಿಗೆ ಬರುತ್ತಿದ್ದೇವೆ…. ನೀವು ಬನ್ನಿ ನಿಮ್ಮವರನ್ನು ಕರೆತನ್ನಿ… fans
17/12/2025

ಇದೇ 21-12-2025 ಭಾನುವಾರ , ಮಳವಳ್ಳಿಗೆ ಬರುತ್ತಿದ್ದೇವೆ…. ನೀವು ಬನ್ನಿ ನಿಮ್ಮವರನ್ನು ಕರೆತನ್ನಿ…

fans

ಬೆಂಗಳೂರಿನ ಕಲಾಗ್ರಾಮದಲ್ಲಿ ನಡೆದ ರಂಗಪಯಣ ನಾಟಕೋತ್ಸವದಲ್ಲಿ ಗುರುಗಳಾದ ಮೈಮ್ ರಮೇಶ್ ಅವರೊಂದಿಗೆ ಸಂವಾದ ಹಾಗೂ ನಾದಬ್ರಹ್ಮ ಡಾ.ಹಂಸಲೇಖ ಹಾಗೂ ಸಮು...
08/11/2025

ಬೆಂಗಳೂರಿನ ಕಲಾಗ್ರಾಮದಲ್ಲಿ ನಡೆದ ರಂಗಪಯಣ ನಾಟಕೋತ್ಸವದಲ್ಲಿ ಗುರುಗಳಾದ ಮೈಮ್ ರಮೇಶ್ ಅವರೊಂದಿಗೆ ಸಂವಾದ ಹಾಗೂ ನಾದಬ್ರಹ್ಮ ಡಾ.ಹಂಸಲೇಖ ಹಾಗೂ ಸಮುದಾಯ ಗುಂಡಣ್ಣ ಮತ್ತು ರಂಗಪಯಣ ಕುಟುಂಬದವರಿಂದ ಶುಭಹಾರೈಕೆ ಮತ್ತು ರಂಗಗೌರವ.

fans

ಕರ್ನಾಟಕ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ಪ್ರಧಾನ ಸಮಾರಂಭ 💛❤️🙏 Mime Ramesh
04/11/2025

ಕರ್ನಾಟಕ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ಪ್ರಧಾನ ಸಮಾರಂಭ 💛❤️🙏 Mime Ramesh

ನವೆಂಬರ್ 5 ಕ್ಕೆ ಕಲಾಗ್ರಾಮದಲ್ಲಿ ರಂಗಪಯಣ ನಾಟಕೋತ್ಸವಕ್ಕೆ ನಾವು ಬರುತ್ತಿದೇವೆ. ನೀವು ಬನ್ನಿ ನಿಮ್ಮವರನ್ನು ಕರೆತನ್ನಿ.  fans
04/11/2025

ನವೆಂಬರ್ 5 ಕ್ಕೆ ಕಲಾಗ್ರಾಮದಲ್ಲಿ ರಂಗಪಯಣ ನಾಟಕೋತ್ಸವಕ್ಕೆ ನಾವು ಬರುತ್ತಿದೇವೆ. ನೀವು ಬನ್ನಿ ನಿಮ್ಮವರನ್ನು ಕರೆತನ್ನಿ.

fans

ಇಂದು ರಾಜ್ಯ ಸರ್ಕಾರದ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸುತ್ತಿರುವ ಹಿರಿಯ ರಂಗಕರ್ಮಿ ಮೈಮ್ ರಮೇಶ್ ಅವರನ್ನು ವಿಧಾನಸಭೆಯ ಮಾನ್...
01/11/2025

ಇಂದು ರಾಜ್ಯ ಸರ್ಕಾರದ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸುತ್ತಿರುವ ಹಿರಿಯ ರಂಗಕರ್ಮಿ ಮೈಮ್ ರಮೇಶ್ ಅವರನ್ನು ವಿಧಾನಸಭೆಯ ಮಾನ್ಯ ಸಭಾಧ್ಯಕ್ಷರಾದ ಶ್ರೀ ಯು ಟಿ ಖಾದರ್ ಅವರು ಅಭಿನಂದಿಸಿದರು.

fans

ನಮ್ಮ ಗುರುಗಳಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ❤️🙏
31/10/2025

ನಮ್ಮ ಗುರುಗಳಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ❤️🙏

Address

Mysore
570005

Alerts

Be the first to know and let us send you an email when GPIER posts news and promotions. Your email address will not be used for any other purpose, and you can unsubscribe at any time.

Share