25/06/2026
*ಪರಮಪೂಜ್ಯ ಶ್ರೀ ಶ್ರೀ ಶ್ರೀ ಪೇಜಾವರ ಮಠಾಧೀಶ ವಿಶ್ವೇಶ ತೀರ್ಥ ಸ್ವಾಮಿಜಿ* ಯವರ ಶಿಷ್ಯ
*ಶ್ರೀ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ* ರ
ದಿವ್ಯ ಉಪಸ್ಥಿತಿ ಹಾಗೂ ಅವರ ಅಮೃತಹಸ್ತದಿಂದ 1ನೆಯ ಫೆಬ್ರವರಿ 2026 ರಂದು ಉದ್ಘಾಟನೆಗೊಂಡ ,
*ಪೂಜ್ಯ ಶ್ರೀ ಹರಿದಾಸ ಭಟ್ ಪೆರ್ಣಂಕಿಲ*
ಅವರ ಶುಭಾಶೀರ್ವಾದದೊಂದಿಗೆ
ಶ್ರೀ ಅಂಬಿಕಾ ಆದಿನಾಥೇಶ್ವರ ದೇವಸ್ಥಾನ , ವಿದ್ಯಾವಿಹಾರ್ ಇದರ ಆಡಳಿತ ಮೊಕ್ತೇಸರ
*ಶ್ರೀ ಹರಿದಾಸ ಗೋಪಾಲ ಶೆಟ್ಟಿ*
ಇವರ ಸಂಪೂರ್ಣ ಸಹಕಾರದೊಂದಿಗೆ
*ಶ್ರೀ ರಾಮಾಭಿವಂದ್ಯ ಯಕ್ಷ ಸೇವಾ ಬಳಗ ಮುಂಬಯಿ* ಹಾಗೂ *ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ* ದ ಸಂಯುಕ್ತ ಆಯೋಜನೆಯಲ್ಲಿ
*ಪ್ರಭು ರಾಮಚಂದ್ರ ದೇವರ ಅವತಾರದ ಆರಂಭದಿಂದ ಶ್ರೀ ದೇವರ ನಿರ್ಯಾಣದವರೆಗಿನ ಸಂಪೂರ್ಣ ಶ್ರೀ ರಾಮ ಚರಿತ್ರೆ*- *ಶ್ರೀ ರಾಮ ಕಥಾ ಹೃದಯಂ* ಪುಣ್ಯಪ್ರದ ಇಪ್ಪತ್ನಾಲ್ಕು ಕಂತುಗಳ ಸರಣಿ ತಾಳಮದ್ದಳೆ ಕಾರ್ಯಕ್ರಮದ *ದಶಮ ಪ್ರಸ್ತುತಿ* :-
*ಸೀತಾನ್ವೇಷಣೆ* ಎಂಬ *ತಾಳಮದ್ದಲೆ* ಪ್ರಸಂಗವು ದಿನಾಂಕ *28 -06 -2026* ರ *ಭಾನುವಾರದಂದು ಶ್ರೀ ಅಂಬಿಕಾ ಆದಿನಾಥೇಶ್ವರ* *ಮಹಾಗಣಪತಿ ದೇವಸ್ಥಾನ ಗಾಂವ್ದೇವಿ ವಿದ್ಯಾವಿಹಾರ್ (ಪಶ್ಚಿಮ)-* ಇಲ್ಲಿ ಜರುಗಲಿರುವುದು.
*ಮಧ್ಯಾಹ್ನ 2:15 ರಿಂದ ಶ್ರೀ ಅಯ್ಯಪ್ಪ ಭಜನಾ ಮಂಡಳಿ, ಅಜ್ದೆಪಾಡ, ಡೊಂಬಿವಲಿ (ಪೂರ್ವ)* ಇವರಿಂದ *ಶ್ರೀ ರಾಮ ಸಂಕೀರ್ತನೆಯು* ನಡೆಯಲಿದೆ.
ಈ ಕಾರ್ಯಕ್ರಮದ ಅತಿಥಿಗಳಾಗಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಅಧ್ಯಕ್ಷರಾದ *ಶ್ರೀ ನಿತ್ಯಾನಂದ* *ಕೋಟ್ಯಾನ್* ಹಾಗೂ ಶ್ರೀ ಗುರು ನಾರಾಯಣ ಸ್ವಾಮಿ ಯಕ್ಷಗಾನ ಮಂಡಳಿ (ಸಾಂತಾಕ್ರೂಜ್)ಯ ಕಾರ್ಯಾಧ್ಯಕ್ಷರಾದ ಶ್ರೀ *ನವೀನ್ ಪಡು ಇನ್ನ* ಆಗಮಿಸಲಿರುವರು.
ಆ ದಿನ ಮುಂಬೈ ಮಹಾನಗರದಲ್ಲಿ ಸರಿ ಸುಮಾರು ಮೂರು ದಶಕಗಳಿಂದ ಯಕ್ಷಗಾನದ ನೇಪಥ್ಯ ಕಲಾವಿದರಾಗಿ ಸೇವೆ ಸಲ್ಲಿಸುತ್ತಿರುವ ಹಿರಿಯರಾದ *ಶ್ರೀ ಕೃಷ್ಣ ಬಂಗೇರ* ಪ್ರಸಂಗ ಕರ್ತ ಕಲಾವಿದ *ಶ್ರೀ ಎಂ ಟಿ ಪೂಜಾರಿ* ಸಾಹಿತಿ ಕಲಾವಿದ *ಶ್ರೀ ಕೊಲ್ಯಾರು ರಾಜು ಶೆಟ್ಟಿ* ನ್ಯಾಯವಾದಿ ಕಲಾವಿದೆ *ಶ್ರೀಮತಿ ಗೀತಾ Rl ಭಟ್* ದಂಪತಿಗಳನ್ನು
ಪರಮಪೂಜ್ಯ *ವೇದಮೂರ್ತಿ ಪೆರ್ಣಂಕಿಲ ಶ್ರೀ ಹರಿದಾಸ ಭಟ್* ಇವರ ಆಶಯದಂತೆ ಗಣ್ಯರ ಉಪಸ್ಥಿತಿಯಲ್ಲಿ ಗೌರವಿಸಲಾಗುವುದು.
ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಗೌರವದ ಉಪಸ್ಥಿತಿಯೊಂದಿಗೆ ಸಹಕರಿಸಬೇಕಾಗಿ ವಿನಂತಿಸುವ,
*ವಾಸು ಮಾರ್ನಾಡ್*
*ಸುರೇಶ್ ನಂದ್ರೊಳ್ಳಿ*