15/12/2021
ಏನ್ ಡವ್ ಮಾಡ್ತಾನ್ ಗುರು ಮೋದಿ...
ಅವತ್ ನೋಡಿದ್ರೆ ಕೇದಾರನಾಥದಲ್ಲಿ ಪ್ರಾಂಗಣದೊಳಗೇ ಚಪ್ಲಿ ಹಾಕೊಂಡ್ ಓಡಾಡ್ತಿದ್ದ.
ನಿನ್ನೆ ಗಂಗಾ ನದಿಯಲ್ಲಿ ಮುಳುಗು ಹಾಕಿದ್ದೇ, ಮಧ್ಯರಾತ್ರಿ ವರೆಗೂ ನಡ್ಕೊಂಡ್ ಓಡಾಡಿದ್ದೇ ದೇಶದ ತುಂಬಾ ದೊಡ್ ವಿಷ್ಯ ಆಗೋಗಿದೆ...
ಮೋದಿ ದೇವಸ್ಥಾನಗಳ ವಿಸಿಟ್ ಹಾಕಿದಾಗೆಲ್ಲಾ,
ಅದೇನು ಬರದಿದ್ರೂ ಇಂತಹ ವಿಚಾರಗಳಂತೂ ತುಂಬಾ ಚರ್ಚೆಗೆ ಬರ್ತವೆ. ಅದು ತಪ್ಪೇನಲ್ಲ, ಯಾಕಂದ್ರೆ ನಾವು ನೋಡೋ ಅಥವಾ ಹೋಗೋ ದೇವಸ್ಥಾನಗಳು ಇಲ್ಲಿನ ಆಚಾರ ವಿಚಾರಗಳು ನೋಡಿದವ್ರಿಗೆ ಅವೆಲ್ಲ ಒಂತರಾ ಅಜೀಬು, ನಾಟಕ ಅಥವಾ ಅದ್ರಲ್ಲೇನಿದೆ ದೊಡ್ ಮ್ಯಾಟ್ರು ಅನ್ಸೋದ್ ಸಹಜ.
ಆದರೆ...
ನಮ್ಮ ಸುತ್ತಲಿನ ಪರಿಸರದ ಚಿತ್ರಣವನ್ನೇ ಜಗತ್ತಿನ ಅಷ್ಟೂ ವಿಚಾರಗಳಿಗೂ ತುಲನೆ ಮಾಡಿ ವಾದ ಮಾಡೋಕ್ ನಿಲ್ತೀವಲ್ಲ ಅದು ತಪ್ಪು ಅಷ್ಟೇ.
ಯಾಕೆಂದರೆ ಒಂದ್ಸಲ ಕೇದಾರನಾಥ ದೇವಸ್ಥಾನದ ನೆಲದ ಮೇಲೆ ಬರಿಗಾಲಲ್ಲಿ ನಡೆಯದೆ, ಡಿಸೆಂಬರಿನ ಚಳಿಯಲ್ಲಿ ಗಂಗೆಯಲ್ಲೊಂದು ಮುಳಕು ಹಾಕದೆ, ಕನಿಷ್ಟ ಆ ನೀರಿನಲ್ಲಿ ಬೆರಳೂ ಅದ್ದದೆ, ಅಲ್ಲಿನ ಪ್ರದೇಶಗಳಲ್ಲಿ ಸೂರ್ಯಾಸ್ತವಾದ ನಂತರದಲ್ಲಿ ಒಂದಿಷ್ಟು ಹೊತ್ತು ಅಲೆದಾಡದೆ ಅದನ್ನು ಗ್ರಹಿಸೋದಿರ್ಲಿ ಊಹಿಸೋಕೂ ಸಾಧ್ಯವಿಲ್ಲ.
ಹತ್ರತ್ರ ಮೈನಸ್ ಡಿಗ್ರಿಗಳಲ್ಲೇ ಸುತ್ತಾಡೋ ಉಷ್ಣಾಂಶದ ಕಾರಣ ಎತ್ತರದಲ್ಲಿ ಗ್ಲೇಶಿಯರ್ ಗಳಿಗೆ ಹತ್ತಿರವಿರೋ ಬಹುತೇಕ ದೇವಸ್ಥಾನಗಳ ಪ್ರಾಂಗಣದೊಳಗೂ ಶೂ ಧರಿಸೋಕೆ ಅವಕಾಶವಿರುತ್ತದೆ, ಒಳಭಾಗದಲ್ಲೂ ದಪ್ಪನೆಯ ಕಾರ್ಪೆಟ್ ಹಾಕಿ ಪಾದಗಳಿಗೆ ರಕ್ಷಣೆ ಒದಗಿಸುತ್ತಾರೆ, ಅದಿಲ್ಲವೆಂದರೆ ಗಂಟೆಯೊಳಗೆ ಬೆರಳುಗಳ ತುದಿಯನ್ನೋದು ರಸಗುಲ್ಲದಂತೆ ಊದಿಕೊಂಡು ಬಿಟ್ಟಿರ್ತವೆ ಒಳಗೆಲ್ಲ ನೀರು ತುಂಬ್ಕೊಂಡು ಜಸ್ಟ್ ಮಿಸ್ಸಾದ್ರೂ ಐಸ್ ಕ್ಯಾಂಡಿ ಕಚ್ಚಿದಾಗ ಪೀಸು ಉದುರೋಹಾಗೆ ಬೆರಳೇ ಉದುರಿ ಬೀಳ್ತಿರ್ತವೆ.
ನಿಮಗೆ ಗೊತ್ತಿರ್ಲಿ...
ಹಿಮಾಲಯದಿಂದ ಗ್ಲೇಶಿಯರ್ಗಳು ಕರಗಿ ಹರಿದು ಬರೋ ಅಷ್ಟೂ ನದಿಗಳ ತಪ್ಪಲು ಪ್ರದೇಶಗಳು ಸೂರ್ಯಾಸ್ತವಾಗುತ್ತಿದ್ದ ಹಾಗೆಯೇ ಊರಿಗೂರೇ ಅಕ್ಷರಶಃ ಫ್ರೀಜ಼ರ್ ಆಗಿ ಮಾರ್ಪಾಡಾಗಿ ಬಿಡುತ್ತವೆ.
ಅದರಲ್ಲೂ ಡಿಸೆಂಬರ್ ತಿಂಗಳಂತೂ ಇಪ್ಪತ್ತನಾಲ್ಕು ಗಂಟೆಯೂ ಊರೆಂಬ ಊರೇ ಪುಲ್ ಹೈ ಪಾಯಿಂಟಲ್ಲಿರೋ ಫ್ರಿಡ್ಜು.
ಇದರ ಜೊತೆಯಲ್ಲಿ ಆಕ್ಸಿಜನ್ ಲೆವೆಲ್ಲೂ ಕಮ್ಮಿ ಇರೋ ಕಾರಣ ಎಷ್ಟು ಉಸಿರಾಡಿದ್ರೂ ಗಾಳಿಯೇ ಸಾಕಾಗದೆ ಹತ್ತು ಹೆಜ್ಜೆ ನಡೆದರೂ ಕಿಲೋ ಮೀಟರು ನಡೆದಷ್ಟು ಆಯಾಸ, ಸುಸ್ತು ಆವರಿಸಿಕೊಂಡು ಬಿಟ್ಟಿರುತ್ತದೆ.
ಇಂತಹದ್ದೊಂದು ಸಮಯದಲ್ಲಿ,
ಸ್ನಾನ ಮಾಡೋದೆಲ್ಲಾ ದೂರದ ಮಾತು, ಟಾಯ್ಲೆಟ್ಟಿಗೆ ಹೋಗಿ ತೊಳ್ಕೊಂಡ್ರೂ ಬೆರಳು ಬ್ಯಾಕಿನ ಸ್ಪರ್ಶ ಜ್ಞಾನ ಮರಳೋದಕ್ಕೆ ಕನಿಷ್ಟ ಹತ್ತು ನಿಮಿಷ ಬೇಕು. ಅಷ್ಟೇ ಏಕೆ ನಾವು ಉಸಿರಾಡೋಕೆ ಒಳಗೆಳೆದುಕೊಳ್ಳೋ ಗಾಳಿಯೂ ಕೂಡಾ ಒಳಗೆ ಹೋಗೋ ಟೈಮಲ್ಲಿ ಸುಮ್ನೆ ಹೋಗದೆ ಮೂಗಿನ ಒಳಪದರಕ್ಕೆ ಬ್ಲೇಡಿಂದ ಗೆರೆ ಎಳೆದುಕೊಂಡೇ ಹೋಗಿರುತ್ತದೆ. ಗೊತ್ತೇ ಆಗದೆ ನೀರು ಹರಿದಂತೆ ರಕ್ತ ಸುರಿಯೋಕ್ ಶುರುವಾಗಿರುತ್ತೆ.
ಹೀಗಿರೋ ವಾತಾವರಣದಲ್ಲಿ...
ಎಪ್ಪತ್ತು ವರ್ಷದ ಹಿರಿಯನೊಬ್ಬ ಗಂಗಾ ನದಿಗಲ್ಲಿ ಸ್ನಾನ ಮಾಡಿ, ಒದ್ದೆ ಬಟ್ಟೆಯಲ್ಲೇ ಬರಿಗಾಲಲ್ಲೇ ಸಾಗಿ ದೇವರ ಪೂಜೆಯಲ್ಲಿ ಪಾಲ್ಗೊಳ್ಳುತ್ತಾನೆ. ಇಡೀ ದಿನ ಗಾಣದೆತ್ತಿನಂತೆ ಸುತ್ತೋದಲ್ಲದೆ, ಮಧ್ಯರಾತ್ರಿ ಕಳೆದು ಬೆಳಗಾಗುತ್ತಾ ಬಂದರೂ ತನ್ನ ಕರ್ತವ್ಯದಲ್ಲಿ ತೊಡಗಿಸಿಕೊಳ್ಳುತ್ತಾನೆ ಎಂದರೆ ಆತನೊಳಗಿನ ಆಧ್ಯಾತ್ಮ ಅದೆಷ್ಟು ಜಾಗೃತವಾಗಿರಬಹುದು, ಅದ್ಯಾವ ಮಟ್ಟದ ಸಂತನಾಗಿರಬಹುದು ಊಹಿಸಿಕೊಳ್ಳಿ.
ಅಂತವರಷ್ಟಲ್ಲದಿದ್ರೂ...
ಅದರ ಒಂದಂಶವೂ ದೇಹ ದಂಡನೆಯನ್ನು ರೂಢಿಸಿಕೊಳ್ಳದ, ಅಂತಹದ್ದೊಂದು ಪರಿಸ್ಥಿತಿಯಲ್ಲಿ ಒಮ್ಮೆಯೂ ನಮ್ಮ ದೇಹವನ್ನು ಪರೀಕ್ಷಿಸಿಕೊಳ್ಳದೇ ಇದ್ದಾಗ...
ಅವ್ನನ್ನು ಟೀಕೆ ಮಾಡೋದು,
ಆಡಿಕೊಂಡು ಅಂಡು ಬಡಿದುಕೊಂಡು ಕುಳಿತಲ್ಲೇ ತೊಪತೊಪನೆ ಎದ್ದೆದ್ದು ಖುಷಿ ಪಡಬಹುದೇ ಹೊರತು,
ಆತನ ಪಾದ ಮುಟ್ಟೋದಿರ್ಲಿ ಕಾಲ ನಡುವಿನಿಂದ ನುಸುಳೋದಕ್ಕೂ ಯೋಗ್ಯರಲ್ಲ ನಾವು.
ಈ ಸಲವೂ ಎಂದಿನಂತೆ ಇದ್ರ ಬಗ್ಗೆ ಬರೀಬಾರ್ದು ಅಂತಾನೇ ಇದ್ದೆ. ನಿಜಕ್ಕೂ ಗೊತ್ತಿಲ್ಲದೆ ಗೊಂದಲದಲ್ಲಿರೋ ಜೀವಗಳಿಗಾದ್ರೂ ವಿಷ್ಯ ತಿಳೀಲಿ ಅನ್ನೋ ಕಾರಣಕ್ಕೆ ಬರೆದಿದ್ದೀನಷ್ಟೇ.
ಅಷ್ಟಲ್ಲದೇ ಹೇಳಿದಾರಾ ಹಿರಿಯರು...
ದೇಶ ಸುತ್ತಿ ನೋಡಬೇಕು ಅಂತ.
ಆಗಲೇ ಬಾವಿಯೊಳಗಿನ ಕಪ್ಪೆಯ ಮನಸ್ಥಿತಿಯಿಂದ ಹೊರಬರೋಕ್ ಸಾಧ್ಯ ನಾನಾಗಿರಲಿ ಅಥವಾ ನೀವು.
ಇಂತಹ ಮಹಾನ್ ವ್ಯಕ್ತಿಯ ಕಾಲಘಟ್ಟದಲ್ಲಿ ಪ್ರತ್ಯಕ್ಷ ಸಾಕ್ಷಿಯಾಗಿದ್ದೀನಲ್ಲ ಅನ್ನೋದೇ ಹೆಮ್ಮೆ ನಂಗಂತೂ.
#ನನ್ನಪ್ರಧಾನಿನನ್ನಹೆಮ್ಮೆ
#ರಾಜಕೀಯದಲ್ಲೊಬ್ಬಸಂತ. ❤