ಹೊಸಪಟ್ಟಣ ಯಕ್ಷ ಕಲಾ ಟ್ರಸ್ಟ್

  • Home
  • India
  • Honavar
  • ಹೊಸಪಟ್ಟಣ ಯಕ್ಷ ಕಲಾ ಟ್ರಸ್ಟ್

ಹೊಸಪಟ್ಟಣ ಯಕ್ಷ ಕಲಾ ಟ್ರಸ್ಟ್ ಯಕ್ಷಗಾನ ಕಾರ್ಯಕ್ರಮಗಳಿಗಾಗಿ ಸಂಪರ್ಕಿಸಿ

04/09/2026
🙏🙏
27/08/2026

🙏🙏

‘ನಿನ್ನೆ ಮುಂಬೈ ಹೆಗಡೆ ಭವನ ಐರೋಲಿಯಲ್ಲಿ ನಡೆದ ಶ್ರೀ ರಾಘವೇಂದ್ರ ಮಹಿಮೆ – ಬ್ರಹ್ಮಲೋಕದಿಂದ ಭೂಲೋಕದ ವರೆಗೆ’  ಕಲಾವಿದರಿಗೆ ಅಮೂಲ್ಯವಾದ ಕಲಾವೇದಿ...
25/08/2026

‘ನಿನ್ನೆ ಮುಂಬೈ ಹೆಗಡೆ ಭವನ ಐರೋಲಿಯಲ್ಲಿ ನಡೆದ ಶ್ರೀ ರಾಘವೇಂದ್ರ ಮಹಿಮೆ – ಬ್ರಹ್ಮಲೋಕದಿಂದ ಭೂಲೋಕದ ವರೆಗೆ’

ಕಲಾವಿದರಿಗೆ ಅಮೂಲ್ಯವಾದ ಕಲಾವೇದಿಕೆಯನ್ನು ತೆರೆದು, ನಮ್ಮ ಕಲಾಸಾಧನೆಗೆ ಬೆಂಬಲವಾಗಿ ನಿಂತ ಮುಂಬೈ ಮಹಾನಗರದ ಮಹಾಕಲಾಪೋಷಕರು, ಹಾಗೂ ಕಲಾಭಿಮಾನಿಗಳ ಸಂಪೂರ್ಣ ಸಹಕಾರದಿಂದ ಯಶಸ್ವಿ ಪ್ರದರ್ಶನ ಕಂಡಿತು.

ಯಕ್ಷಗಾನದ ರಸಾನುಭವದಲ್ಲಿ ತಲ್ಲೀನರಾಗಿ, ತಮ್ಮ ಉಪಸ್ಥಿತಿ ಮತ್ತು ಪ್ರೋತ್ಸಾಹದಿಂದ ಕಲಾವಿದರ ಉತ್ಸಾಹವನ್ನು ಇಮ್ಮಡಿಗೊಳಿಸಿದ ಸರ್ವ ಕಲಾಭಿಮಾನಿಗಳಿಗೂ ಅನಂತ ಕೃತಜ್ಞತೆಗಳು. 🙏

ನಿಮ್ಮ ಪ್ರೀತಿ, ಪ್ರೋತ್ಸಾಹ ಮತ್ತು ಸಹಕಾರವೇ ನಮ್ಮ ಕಲಾಯಾತ್ರೆಯ ಅಕ್ಷಯ ಶಕ್ತಿ.
ಈ ಕಲಾಪಯಣದ ಹೆಜ್ಜೆಗಳಿಗೆ ನಿಮ್ಮ ಬೆಂಬಲ ಸದಾ ಸ್ಫೂರ್ತಿಯ ಸೆಲೆಯಾಗಿರಲಿ.🙏🙏

ರಂಗ ಸಜ್ಜಾಗಿದೆ… ರಾಘವೇಂದ್ರ ಮಹಿಮೆ ಮೊಳಗಲಿದೆ! 🌺✨ಯಕ್ಷಗಾನದ ರಂಗವೈಭವಕ್ಕೆ ಹೊಸ ಹೊಳಪನ್ನು ನೀಡುತ್ತಾ ಹೊಸಪಟ್ಟಣ ಯಕ್ಷ ಕಲಾ ಟ್ರಸ್ಟ್ ಇದೇ ಮೊದಲ...
08/08/2026

ರಂಗ ಸಜ್ಜಾಗಿದೆ… ರಾಘವೇಂದ್ರ ಮಹಿಮೆ ಮೊಳಗಲಿದೆ! 🌺✨

ಯಕ್ಷಗಾನದ ರಂಗವೈಭವಕ್ಕೆ ಹೊಸ ಹೊಳಪನ್ನು ನೀಡುತ್ತಾ ಹೊಸಪಟ್ಟಣ ಯಕ್ಷ ಕಲಾ ಟ್ರಸ್ಟ್ ಇದೇ ಮೊದಲ ಬಾರಿಗೆ ಬೆಂಗಳೂರಿನ ಪ್ರತಿಷ್ಠಿತ ರವೀಂದ್ರ ಕಲಾಕ್ಷೇತ್ರದಲ್ಲಿ ತನ್ನ ಕಲಾಪ್ರದರ್ಶನಕ್ಕೆ ಸಜ್ಜಾಗಿದೆ.

ಮಂತ್ರಾಲಯದ ಮಠಾಧೀಶರಾದ ಜಗದ್ಗುರು ಪರಮಪೂಜ್ಯ ಶ್ರೀ ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ದಿವ್ಯಾ ಆಶೀರ್ವಾದದೊಂದಿಗೆ, ನಂದ್ರೊಳ್ಳಿ ಶಾಂತಾರಾಮ ಶೆಟ್ಟಿ ವಿರಚಿತ ‘ಶ್ರೀ ರಾಘವೇಂದ್ರ ಮಹಾತ್ಮೆ – ಬ್ರಹ್ಮಲೋಕದಿಂದ ಭೂಲೋಕದ ವರೆಗೆ’ ಅವಳಿ ರಂಗಸ್ಥಳದಲ್ಲಿ ಯಕ್ಷಗಾನ ಪ್ರಸಂಗವು ಆಗಸ್ಟ್ 9ರಂದು ಮಧ್ಯಾಹ್ನ 2 ಗಂಟೆಗೆ ರಂಗದ ಮೇಲೆ ಅನಾವರಣಗೊಳ್ಳಲಿದೆ.

ಭಕ್ತಿ, ಭಾವ ಮತ್ತು ರಂಗವೈಭವವನ್ನು ಮೈಗೂಡಿಸಿಕೊಂಡ ಈ ಪ್ರಸಂಗದಲ್ಲಿ ಚಂಡೆಯ ಘೋಷ, ಬಣ್ಣದ ವೇಷ, ಲಯಬದ್ಧ ಹೆಜ್ಜೆ ಹಾಗೂ ಮೊಳಗುವ ಮಾತುಗಾರಿಕೆ ಒಂದಾಗಿ ಶ್ರೀ ರಾಘವೇಂದ್ರರ ಮಹಿಮೆಯನ್ನು ರಂಗದಲ್ಲಿ ಜೀವಂತಗೊಳಿಸಲಿವೆ.

ಹಿಮ್ಮೇಳದಲ್ಲಿ ಪ್ರಸನ್ನ ಭಟ್ ಬಾಳ್ಕಲ್, ಸೃಜನ್ ಗಣೇಶ ಹೆಗಡೆ, ಸುನಿಲ್ ಭಂಡಾರಿ ಕಡತೋಕ, ಸುಬ್ರಹ್ಮಣ್ಯ ಭಟ್ ಬಾಡ, ಶಿವಾನಂದ ಕೋಟ ಹಾಗೂ ರಾಮನ್ ಹೆಗಡೆ ಮೂರುರು ಸಾಥ್ ನೀಡಲಿದ್ದಾರೆ.

ಮುಮ್ಮೇಳದಲ್ಲಿ ನರಸಿಂಹ ಚಿಟ್ಟಾಣಿ, ಈಶ್ವರ ನಾಯ್ಕ ಮಂಕಿ, ಪ್ರಸನ್ನ ಶೆಟ್ಟಿಗಾರ ಮಂದಾರ್ಥಿ, ಪ್ರಕಾಶ ಕಿರಾಡಿ, ಚಂದ್ರಹಾಸ ಗೌಡ ಹೊಸಪಟ್ಟಣ, ಶಿವಾನಂದ ಶೆಟ್ಟಿ ಪೆರ್ಲ.ಪವನ ಕುಮಾರ್ ಸಾನ್ಮನೆ .ವಿಘ್ನೇಶ್ವರ ಹಾವಗೋಡಿ, ಪ್ರಶಾಂತ ಹೆಗಡೆ .ಗಣೇಶ ಹಳದಿಪುರ. ಗೌರೀಶ್ ಗುಣವಂತೆ ಕಾಣಿಸಿಕೊಳ್ಳಲಿದ್ದಾರೆ.

ಸ್ತ್ರೀವೇಷದಲ್ಲಿ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ, ವಿಜಯ ಗಾಣಿಗ ಬಿಜಮಕ್ಕಿ ಹಾಗೂ ವಸಂತ ನಾಯ್ಕ ಚಿಕ್ಕೊಳ್ಳಿ ಕಾಣಿಸಿಕೊಳ್ಳಲಿದ್ದು, ಹಾಸ್ಯದಲ್ಲಿ ರವೀಂದ್ರ ದೇವಾಡಿಗ ಕಮಲಶಿಲೆ ಹಾಗೂ ಪಾಂಡು ಪಟಗಾರ ಯಾಣ ರಂಜಿಸಲಿದ್ದಾರೆ.

ಒಂದು ಮಧ್ಯಾಹ್ನ… ಒಂದು ರಂಗ… ಭಕ್ತಿಯೊಂದಿಗಿನ ಒಂದು ಅಪೂರ್ವ ಯಕ್ಷಾನುಭವ! 🌸

ಬನ್ನಿ… ರಾಘವೇಂದ್ರ ಮಹಿಮೆಯ ದಿವ್ಯತೆಯಲ್ಲಿ ಮಿಂದೇಳೋಣ; ಹೊಸಪಟ್ಟಣದ ಯಕ್ಷನಾದಕ್ಕೆ ಸಾಕ್ಷಿಯಾಗೋಣ. 🙏✨

30/07/2026

ಯಕ್ಷಗಾನದಲ್ಲೂ "ರಾಯರಿದ್ದಾರೆ"

ಶ್ರೀ ರಾಘವೇಂದ್ರ ಮಹಿಮೆ

Address

ಹೊಸಪಟ್ಟಣ
Honavar
581334

Website

Alerts

Be the first to know and let us send you an email when ಹೊಸಪಟ್ಟಣ ಯಕ್ಷ ಕಲಾ ಟ್ರಸ್ಟ್ posts news and promotions. Your email address will not be used for any other purpose, and you can unsubscribe at any time.

Shortcuts

Share

Category