Dr T H Lavakumar

Dr T H Lavakumar Actor ,Director and a playwright interested in literature art and music

ಗ್ರಾಮ ಸ್ವರಾಜ್ಯದ ಬಹು ಮುಖ್ಯ ಚಟುವಟಿಕೆ ಗ್ರಾಮಸಭೆ ಮತ್ತು ವಾರ್ಡ್ ಸಭೆಗಳು. ವಿಪರ್ಯಾಸ ಎಂದರೆ ಬಹುತೇಕ ಪಂಚಾಯತಿಗಳಲ್ಲಿ ಈ ಸಭೆಗಳೇ ನಡೆಯುವುದಿಲ...
06/11/2024

ಗ್ರಾಮ ಸ್ವರಾಜ್ಯದ ಬಹು ಮುಖ್ಯ ಚಟುವಟಿಕೆ ಗ್ರಾಮಸಭೆ ಮತ್ತು ವಾರ್ಡ್ ಸಭೆಗಳು. ವಿಪರ್ಯಾಸ ಎಂದರೆ ಬಹುತೇಕ ಪಂಚಾಯತಿಗಳಲ್ಲಿ ಈ ಸಭೆಗಳೇ ನಡೆಯುವುದಿಲ್ಲ ನಡೆದರೂ ಕೇವಲ ತಾಂತ್ರಿಕ ವಿಚಾರಗಳ ವಿನಿಮಯ, ಹಣಕಾಸು ವಿಚಾರ ಮತ್ತು ಸೌಲಬ್ಯಗಳ ಮಾಹಿತಿ ಹಂಚಿಕೆಗೆ ಅವು ಸೀಮಿತವಾಗುತ್ತಿವೆ. ತೀರಾ ಕೆಲವು ಪಂಚಾಯತಿಗಳಲ್ಲಿ ಅವುಗಳ ಆಶಯಗಳು ಚರ್ಚೆಯಾಗುತ್ತಿವೆ . ಈ ನಿಟ್ಟಿನಲ್ಲಿ ಅನೋಡ್ ಸಂಸ್ಥೆಯ ಚಟುವಟಿಕೆಗಳು ಗ್ರಾಮ ಪಂಚಾಯತ್ ಸದಸ್ಯರನ್ನು ಸಾಮಾಜಿಕ ಬದಲಾವಣೆಯ ಹರಿಕಾರರನ್ನಾಗಿಸುವತ್ತ ಮುನ್ನಡೆಸುತ್ತಿವೆ .
ಕಳೆದ ಎರಡು ದಿನಗಳಲ್ಲಿ ಚಿತ್ರದುರ್ಗದ ಅನೇಕ ಪಂಚಾಯತಿಗಳ ಸದಸ್ಯರು ಮತ್ತು ಗ್ರಾಮಸ್ಥರನ್ನು ಬೇಟಿಯಾಗಿ ಮಾತುಕತೆ ನಡೆಸಿದೆವು.

03/10/2024

To Be part of our

"Shramana Ranga Samskruthi"

pls do contact
Raiga Thomas , Dr.T H Lavakumar

[email protected]

"ಶ್ರಮಣ ರಂಗ ಸಂಸ್ಕೃತಿ" ಗೆ ಸೇರಿ

03/10/2024

ಹಶ್ಮಿ ಥಿಯೇಟರ್ ಫೋರಂ ನ ಕೆಲಸಗಳನ್ನು ಅನೇಕರು ಮೆಚ್ಚಿದ್ದೀರಿ ಮತ್ತು ಸದಾ ಪ್ರೋತ್ಸಾಹಿಸಿದ್ದೀರಿ. ಕರ್ನಾಟಕದ ಸಾಮುದಾಯಿಕ ರಂಗಭೂಮಿಗಾಗಿ ದುಡಿವ ತುಡಿತ ನಮ್ಮ ತಂಡದ ಯುವಜನರಿಗಿದೆ. ಹೆಚ್ಚು ಯುವಜನರು ಮತ್ತು ಕಾಲೇಜು ರಂಗಭೂಮಿಗೆ ಸೀಮಿತವಾಗಿ ಮಾಡಿದ ಕೆಲಸದಿಂದ ನಾನು ವಯಕ್ತಿಕವಾಗಿ ಕಲಿತಿದ್ದೇನೆ.

ಸದ್ಯ "ಶ್ರಮಣ ರಂಗ " ಹೆಸರಿನಲ್ಲಿ ಈಗಾಗಲೇ ಸಣ್ಣ ಕೆಲಸಗಳು ಆಗಿವೆ . ಈ ಶ್ರಮಣ ರಂಗದ ಜತೆ ಕೈಜೋಡಿಸಲು ಆಸಕ್ತರು ಮತ್ತು ತಂಡದ ಭಾಗವಾಗಲು ಬಯಸುವವರು ಸಂಪರ್ಕಿಸಿ.

ರೈಗಾ ಥಾಮಸ್ , ಡಾ.ಟಿ.ಎಚ್.ಲವಕುಮಾರ್

[email protected]

ಅಥವಾ ನಿಮ್ಮ ಹೆಸರು , ವಿಳಾಸ ಮತ್ತು ಸಣ್ಣ ರೆಸ್ಯೂಮೆ ನಮಗೆ ಕಳಿಸಿ .

ಶೈಕ್ಷಣಿಕ ರಂಗಭೂಮಿಯಲ್ಲಿನ ಇಪ್ಪತ್ತು ವರ್ಷಗಳ ನಮ್ಮ‌ಕೆಲಸವನ್ನು The Hindu ಪತ್ರಿಕೆಯವರು ಬರೆದಿದ್ದಾರೆ. ನಮ್ಮ ನೆಲದ ಕೆಲಸವನ್ನು ಕನ್ನಡ ಪತ್ರಿ...
27/09/2024

ಶೈಕ್ಷಣಿಕ ರಂಗಭೂಮಿಯಲ್ಲಿನ ಇಪ್ಪತ್ತು ವರ್ಷಗಳ ನಮ್ಮ‌ಕೆಲಸವನ್ನು The Hindu ಪತ್ರಿಕೆಯವರು ಬರೆದಿದ್ದಾರೆ. ನಮ್ಮ ನೆಲದ ಕೆಲಸವನ್ನು ಕನ್ನಡ ಪತ್ರಿಕೆಗಳು ಗುರ್ತಿಸಿಧದು ಕಡಿಮೆಯೇ.
ಸಾವಿರಾರು ಜನ ವಿದ್ಯಾರ್ಥಿಗಳ ಜತೆ ನಡೆಯುವ ಶೈಕ್ಷೀಕ ರಂಗಭೂಮಿಯ ಸಾಧ್ಯತೆಗಳ ಅರಿವೇ ನಮ್ಮ ಸರ್ಕಾರಗಳಿಗಿಲ್ಲ . ನಾವಿನ್ನೂ ಹವ್ಯಾಸೀ , ವೃತ್ತಿ ಇದೇ ಕಾಲದಲ್ಲಿದಲ್ಲಿದ್ದೇವೆ. ಶಿಕ್ಷಣದಲ್ಲಿ ರಂಗಭೂಮಿ ಅಳವಡಿಕೆಗೆ ದಶಕಗಳಷ್ಟು ಒತ್ತಾಯವಿದೆ ಆದರೆ ಅದು ನೆನಗುದಿಗೆ ಬಿದ್ದಿದೆ.

Some of the high points of Hashmi’s Theatre Forum include performing at Rahul Gandhi’s Bharat Jodo Yatra in Tumkur and doing street theatre during the COVID-19 pandemic in around 100 low-income settlement areas

ಅಕಾಡೆಮಿ ಪ್ರಶಸ್ತಿ ಪಡೆದ ನಮ್ಮ ಮುರುಡಯ್ಯ ಬ್ರದರ್ , ಕೆ ಪಿ ಅಶ್ವತ್ಥ್ ಹಾಗೆ ಖ್ಯಾತ ನಟ ಅಚ್ಯುತ್ ಅವರಿಗೆ ಅಭಿನಂದನೆಗಳು.
22/09/2024

ಅಕಾಡೆಮಿ ಪ್ರಶಸ್ತಿ ಪಡೆದ ನಮ್ಮ ಮುರುಡಯ್ಯ ಬ್ರದರ್ , ಕೆ ಪಿ ಅಶ್ವತ್ಥ್ ಹಾಗೆ ಖ್ಯಾತ ನಟ ಅಚ್ಯುತ್ ಅವರಿಗೆ ಅಭಿನಂದನೆಗಳು.

ಹಸಿವಿನ ನೋವು ತುಂಬಾ ಗಾಢವಾದದ್ದು . ನಾವು ಚನ್ನಾಗಿ ಓದಲೆಂಬ ಆಸೆಯಿಂದ ನಮ್ಮಮ್ಮ ಅಪ್ಪ ನಮ್ಮನ್ನು ದೊಡ್ಡಬಳ್ಳಾಪುರದ ಕೊಂಗಾಡಿಯಪ್ಪ ಶಾಲೆಗೆ ಸೇರಿಸ...
11/09/2024

ಹಸಿವಿನ ನೋವು ತುಂಬಾ ಗಾಢವಾದದ್ದು . ನಾವು ಚನ್ನಾಗಿ ಓದಲೆಂಬ ಆಸೆಯಿಂದ ನಮ್ಮಮ್ಮ ಅಪ್ಪ ನಮ್ಮನ್ನು ದೊಡ್ಡಬಳ್ಳಾಪುರದ ಕೊಂಗಾಡಿಯಪ್ಪ ಶಾಲೆಗೆ ಸೇರಿಸಿದ್ರು . ಆ ಕಾಲಕ್ಕೆ ನಮ್ಮೂರಿನ ಒಕ್ಕಲಿಗ ಹೆಣ್ಣುಮಕ್ಕಳಾರೂ ಊರು ಬಿಟ್ಟು ಮಗ್ಗದಲ್ಲಿ ನೇಯ್ಗೆ ಮಾಡಲು ಹೋಗ್ತಾ ಇರ್ಲಿಲ್ಲ. ಬಡತನದ ಕುಲುಮೆಗೆ ಆಹಾರವಾದ ನನ್ನ ನಾಲ್ಕೂ ಅಕ್ಕಂದಿರು ಆಗ ಮುಂಜಾನೆ ಆರಕ್ಕೇ ಮನೆ ಬಿಟ್ಟು ಪೇಟೆಯಲ್ಲಿ ದುಡಿಯಬೇಕಿತ್ತು.

ಮದ್ಯಾನವಾದರೆ ನಾನು ಮತ್ತು ಕುಶ ಇಬ್ಬರೂ ಮಗ್ಗದ ಮನೆಗೆ ಹೋಗಿ ಅಕ್ಕಂದಿರ ಜತೆ ಊಟ ಮಾಡ್ತಿದ್ವಿ ಆಗ ದೊಡ್ಡದೊಂದು ಬಾಕ್ಸಲ್ಲಿ ಅನ್ನ ಮತ್ತು ಚಟ್ಣಿ ಇಲ್ಲವೇ ಅನ್ನ ಮತ್ತು ಬೆಳ್ಳುಳ್ಳಿ ಅಥವಾ ಟಮೇಟೋ ರಸ ಇವೇ ನಮ್ಮ ನಿತ್ಯದ ಆಹಾರವಾಗಿದ್ವು.

ಆ ಕಾಲಕ್ಕೆ ಹಸಿದ ಹೊಟ್ಟೆಗೆ ಆ ಹಸಿರು ಚಟ್ಣಿ ಮತ್ತು ಆ ಬಿಳಿ ಅನ್ನ ನಮ್ಮ ಪಾಲಿನ ಮೃಷ್ಟಾನ್ನ ಆಗಿದ್ವು. ಇವತ್ತು ಸವಿತಾಗೆ ಕೇಳಿ ಅದೇ ಚಟ್ಣಿ ಮತ್ತು ಅನ್ನ ಮಾಡಿಸಿ ಕಾಲೇಜಲ್ಲಿ ತಿನ್ನುವಾಗ ಮತ್ತದೇ ನೆನಪುಗಳು ಮರುಕಳಿಸಿದವು. ಥರಾವರೀ ತಿಂಡಿಗಳ ಈ ಕಾಲದಲ್ಲಿ ಈ ಚಟ್ಣಿ ಬದಿಗೆ ಸರಿದಿದೆ ಆದರೆ ಈಗಲೂ ಇದೇ ಚಟ್ಣಿ ಅನೇಕರ ಮನೆಯ ಪ್ರದಾನ ಆಹಾರವಾಗಿದೆ.

ಆಗ ಶಾಲೆಯಲ್ಲಿ ಅನೇಕರು ಚಿತ್ರಾನ್ನದ ಜತೆಗೆ ಚಟ್ಣಿ ತರ್ಆ ಇದ್ರು ನಾವು ಮಾತ್ರ ಬರೀ ಚಟ್ಣಿ ಆ ಕಾರಣಕ್ಕೇ ಎಲ್ಲರ ಜತೆ ಊಟ ಮಾಡಲು ಎಷ್ಟೊಂದು ಮುಜುಗರ ಪಟ್ಟಿದ್ದೆವು, ಅವಮಾನ ಅಂತ ಭಾವಿಸಿದ್ದೆವು . ಈಗ ಈ ಮಹಾನಗರದ ಮದ್ಯದ ಬ್ರಿಗೇಡ್ ರಸ್ತೆಯಲ್ಲಿ ಹಳೆಯ ನೆನಪುಗಳ ಜತೆ ಹೆಮ್ಮೆಯಿಂದ ಈ ಅನ್ನ ಚಟ್ಣಿ ತಿನ್ತಾ ಇದ್ದೇನೆ. ನಮ್ಮ SJCC ಕಾಲೇಜಿನ ರೋಲು, ಬಿರಿಯಾನಿಗಳ ಮದ್ಯೆ ಈ ಬಿಳಿ ಅನ್ನ ಆ ಹಸಿರು ಚಟ್ಣಿ ಮತ್ತು ಆ ನೆನಪುಗಳು ನನ್ನನ್ನು ಆವರಿಸಿವೆ.

06/09/2024

ನಾನು ಮಾಡದೇ ಇರೋದನ್ನ ಇನ್ನೊಬ್ಬರಿಗೆ ಮಾಡಿ ಅಂತ ಹೇಳಲ್ಲ. ಇದನ್ನು ನಾನು ಹಿರಿಯ ಗಾಂದಿವಾದಿ ದೊರೆಸ್ವಾಮಿ ಅವರಿಂದ ಕಲಿತ ಪಾಟ

Revisiting Classics always fascinates me. Mid Summer Night's Dream is a challenging play everytime i go through it it ca...
30/08/2024

Revisiting Classics always fascinates me. Mid Summer Night's Dream is a challenging play everytime i go through it it calls for new improvisation.

ಆಗಸ್ಟ್ ಮಾಸ ಸ್ವಾತಂತ್ರದ ಮಾಸ . ಬಂದನವೇ ಸಂಸ್ಕೃತಿ ಅಂದುಕೊಂಡಿದ್ದ ಜನತೆ ಬರೀ ಬ್ರಿಟೀಷರ ವಿರುದ್ದ ಮಾತ್ರವಲ್ಲ ನಮ್ಮ ಸಮಾಜವನ್ನು ಸುಡುತ್ತಿರುವ ...
14/08/2024

ಆಗಸ್ಟ್ ಮಾಸ ಸ್ವಾತಂತ್ರದ ಮಾಸ . ಬಂದನವೇ ಸಂಸ್ಕೃತಿ ಅಂದುಕೊಂಡಿದ್ದ ಜನತೆ ಬರೀ ಬ್ರಿಟೀಷರ ವಿರುದ್ದ ಮಾತ್ರವಲ್ಲ ನಮ್ಮ ಸಮಾಜವನ್ನು ಸುಡುತ್ತಿರುವ ವರ್ಗ , ಜಾತಿ ಅಸಮಾನತೆ ಮತ್ತು ಅಂದ ಅನುಕರಣೆಗಳ ವಿರುದ್ದ ಸಹ ಹೋರಾಟ ಮಾಡಿದರು ಮತ್ತು ಆ ಹೋರಾಟ ಸದಾ ಮುಂದುವರೆದಿದೆ .2024 ಆಗಸ್ಟ್ 11 ರಂದು ನಮ್ನೂರಿನಬ ಬೃಂದಾ ಮತ್ತು ಪೃತ್ವಿ ಎನ್ನುವವರು ಅಂತರಜಾತಿ ಹಾಗೂ ಅಂತರ ಭಾಷೆಯ ವಿವಾಹವಾದರು . ನಮ್ಮೂರಿನಲ್ಲಿ ನಾನು ನಡೆಸಿಕೊಟ್ಟ ಮಂತ್ರ ಮಾಂಗಲ್ಯ ವಿಶೇಷವಾಗಿತ್ತು. ರೈತ ಸಂಘದ ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್ , ಚುಕ್ಕಿ ನಂಜುಂಡಸ್ವಾಮಿ Kodihalli Chandrashekar Chukki Nanjundaswamy , Manjunatha Adde ಸರ್ ಜತೆ ಇದ್ರು . ಇಂತಹ ನಡೆಗೆ ಮುಂದಾದ ನಮ್ಮ ರೈತಸಂಘದ ತಿಪ್ಪೂರು ಮುತ್ತೇಗೌಡರಿಗೆ ದನ್ಯವಾದಗಳು.

Performed Mantra mangalya to newly wed couples Brinda and Pritvi . Mantra mangalya is a marriage system proposed by Kannada poet Kuvempu . which radical and simple marriage system away from brahminical shackles .

https://www.facebook.com/share/v/C33wL49mJBZczQ8z/?mibextid=oFDknk

https://www.karnatakamithra.com/News.ID/4534

https://youtu.be/2scNv6GQYxA?si=9kOWGugYmZ6x5_9O

Janardhana Kesaragadde Sir you have been so supportive during my college days and I thank you for all those memories and...
13/08/2024

Janardhana Kesaragadde Sir you have been so supportive during my college days and I thank you for all those memories and glad to travel with you to Melukote for a Theatre Discussion.

ಕರ್ನಾಟಕ ನಾಟಕ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆಗಳು . ಪ್ರೀತಿಯ ಕೆ.ರಾಮಯ್ಯ ಸರ್ ಅವರಿಗೆ ಜೀವಮಾನ ಪ್ರಶಸ್ತಿ ಸಿಕ್ಕಿರುವುದು ನನ್ನ...
08/08/2024

ಕರ್ನಾಟಕ ನಾಟಕ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆಗಳು . ಪ್ರೀತಿಯ ಕೆ.ರಾಮಯ್ಯ ಸರ್ ಅವರಿಗೆ ಜೀವಮಾನ ಪ್ರಶಸ್ತಿ ಸಿಕ್ಕಿರುವುದು ನನ್ನ ಖುಷಿಯನ್ನು ಹೆಚ್ಚಿಸಿದೆ ಹಾಗೇ ಖ್ಯಾತ ತಾರೆ ಉಮಾಶ್ರೀ ಮತ್ತು ಎಚ್.ಎಸ್.ಶಿವಪ್ರಕಾಶ್ ಅವರಿಗೆ ಜೀವಮಾನ ಪ್ರಶಸ್ತಿ ಸಿಕ್ಕಿದೆ.

ದೊಡ್ಡಬಳ್ಳಾಪುರದ ಕ್ರಿಯಾಶೀಲ ರಂಗಕರ್ಮಿ ಡಾ.ಕೆ.ಎಂ ಕೃಷ್ಣಮೂರ್ತಿ ಅವರು ಮತ್ತು ಡಾ.ದೇವನಹಳ್ಳಿ ದೇವರಾಜ್ ಅವರಿಗೆ ವಿಶೇಷ ಅಭಿನಂದನೆಗಳು .

ಎಷ್ಟೋ ಶ್ರೇಷ್ಟರು ಇಲ್ಲಿ ಇಲ್ಲ ಅನ್ನುವ ಕೊರಗು ನನಗೂ ಇದೆ ಆದರೆ ಮುಂದಿನ ವರ್ಷಗಳಲ್ಲಿ ಅವರಿಗೆ ಗೌರವ ಸಿಗುವ ಭರವಸೆ ಸಹ ಇದೆ.

Address

Bangalore
560002

Website

Alerts

Be the first to know and let us send you an email when Dr T H Lavakumar posts news and promotions. Your email address will not be used for any other purpose, and you can unsubscribe at any time.

Contact The Establishment

Send a message to Dr T H Lavakumar:

Share