31/08/2026
ಯಕ್ಷ ಪಂಚಮಿ -5
ನಮ್ಮೆಲ್ಲರ ಪ್ರೀತಿಯ "ನಾಗರಾಜ್ ಆಚಾರ್ ಹಟ್ಟಿಯಂಗಡಿ "ಸಂಯೋಜನೆಯಲ್ಲಿ ಒಂದು ಅದ್ಭುತ ಕಾರ್ಯಕ್ರಮ ವಾಗಿ ಯಶಸ್ವಿಯಾಗಿದೆ.ನಿನ್ನೆ ದಿನ ಕೋಟೇಶ್ವರದಲ್ಲಿ ಯಕ್ಷ ನಿನಾದ ಮೊಳಗಿದ್ದು. ಉತ್ತಮ ಸ್ನೇಹಜೀವಿ ಸಂಘಟಕ ನಾಗರಾಜ್ ಅವರ ಹೋರಾಟ ಅದ್ಭುತ. ಅದೆಷ್ಟೋ ದಿವಸದ ಕನಸನ್ನು ನಿನ್ನೆ ಪೂರ್ತಿಗೊಳಿಸಿ. ಆಗಸದ ಹುಣ್ಣಿಮೆ ಚಂದ್ರನಂತೆ ಮಿಂಚಿದರು. ಎಷ್ಟೋ ಹಗಲು ರಾತ್ರಿ ಶ್ರಮಪಟ್ಟು ತನ್ನ ಉದ್ಯೋಗದ ಕೆಲಸದ ನಡುವೆಯೂ ಇಂತಹ ಒಂದು ಸುಂದರ ಸಮಯಕ್ಕೆ ತನ್ನ ಕಾರ್ಯವೈಖರಿ ಬದಿಗಿಟ್ಟು ಉತ್ತಮ ಸಂಯೋಜನೆ ಮಾಡಿದ್ದಾರೆ!... ಹಾಗೆ ಯಶಸ್ವಿಯಾಗಿದ್ದಾರೆ! ಶುಭವಾಗಲಿ ಅವರ ಈ ಯಕ್ಷ ಪ್ರೀತಿಗೆ ಇನ್ನೂ ನೂರು ಕಾಲ ಇಂತಹ ಎಲೆ ಮರೆಯ ಪ್ರತಿಭೆಗಳ ಗುರುತಿಸಿ ಯಕ್ಷರಂಗಕ್ಕೆ ಅಪಾರ ಕೊಡುಗೆ ಅಮೂಲ್ಯ ರತ್ನವನ್ನು ನೀಡಿ ಎನ್ನುತ್ತಾ. ಶುಭಾಶಯಗಳು
ಇನ್ನೂ ಯಕ್ಷಗಾನ ಬಗ್ಗೆ ಮಾತು....!
ಶ್ರೀ ನಾಗಯಕ್ಷಿ ಯಕ್ಷಕೂಟ ಮಾರ್ಕೋಡು ಕೋಟೇಶ್ವರ ಸಂಸ್ಥೆ ಹಾಗೂ ಅತಿಥಿ ಕಲಾವಿದರಿಂದ.... 100% ಆಟ...ಮಕ್ಕಳ ಸಂಸ್ಥೆ ಯಾದರು ನಿಜಕ್ಕೂ ಯಾವ ಮೇಳಕ್ಕೂ ಪೈಪೋಟಿ ನೀಡಬಲ್ಲ ಪ್ರಚಲಿತ ಕುಂದಾಪುರದ ಹೆಸರಾಂತ ಉತ್ಸಾಹಿಗಳ ತಂಡ....ಯಬ್ಬಾ "ಐರೊಡಿ ಮಂಜುನಾಥ್ ಕುಲಾಲ್ " ಹಾಗೂ ವಿಗ್ನೇಶ್ ಗಿಳಿಯಾರು ಜೋಡೆತ್ತುಗಳ ಗುರುತನ ಸಾರ್ಥಕ... ತಾನು ಕಲಿತ ವಿದ್ಯೆ ಅದೆಷ್ಟೋ ಯಕ್ಷರತ್ನಗಳಿಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ.
ಇನ್ನೂ ಯಕ್ಷ ಪ್ರಸಂಗ : ಬರ್ಬರಿಕ. ಪ್ರಮೀಳಾರ್ಜುನ. ಘೋರಬಿಷಣ ಕಾಳಗ
ಹಿಮ್ಮೆಳದಲ್ಲಿ : ಗಣೇಶ್ ಎಡಮೋಗೆ ಅದ್ಭುತ. ಆರ್ಡಿ ಸಂತೋಷಕುಮಾರ್ ಎಂದಿನಂತೆ ಹೈ ಪೈ...🔥🔥
ಚೆಂಡೆ ಯಲ್ಲಿ ಶಿವಾನಂದ ಕೋಟ ಹಾಗೂ ಯುವ ಯಶಸ್ವಿ ಆದಿತ್ಯಆಚಾರ್ ಸೇನಾಪುರ ಟಾಪ್ ಜೋಡಿ... 🔥🔥
ಮದ್ದಳೆಯ ಭಾರ್ಗವ ಭರತ್ ಚಂದನ್ 🔥🔥
ಇನ್ನೂ ಸಂಸ್ಥೆಯ ಯುವ ಕಲಾವಿದರು ನೆಕ್ಸ್ಟ್ ಲೆವೆಲ್ 🔥🔥🔥
ಅಕ್ಷಯ್ ಕೋಟೇಶ್ವರರ ರೂಡಿಯಂತೆ ಬರ್ಬರಿಕ ಅದ್ಭುತ ಹಾಗೆ ಸುರಾಗ್ ಕುಮಾರ್ ಹೇರೂರ್ ಹಾಸ್ಯ ಚಿಂದಿ, ಇನ್ನೂ ತನ್ಮಯ್ ಕೋಟೇಶ್ವರ ಅರ್ಜುನ ಬೆಂಕಿ, ಸುಮನಾ ಆಚಾರ್ ಮಟಪಾಡಿ ಕೃಷ್ಣ ಸೂಪರ್, ಇನ್ನೂ ಪ್ರತೀಕ್, ಅಕ್ಷಯ್ ಮಾರ್ಕೋಡು ಜೋಡಿ ಸಂಪ್ರದಾಯ ವೇಷ ಹಾಗೆ ಪ್ರೇಕ್ಷಕರ ಕಣ್ಮನ ಸೆಳೆದ ಪ್ರಮೀಳೆ ಧನ್ವಿತಾ ಕೋಟೇಶ್ವರ, ಹಾಗೂ ಅಭಿನಯದ ಮೂಲಕ ಹಾಗೂ ಕುಣಿತದಿಂದ ಜನರ ಮನ ಸೆಳೆದ ವತ್ಸಲೇ ಸಂಜನಾ ಕೋಟೇಶ್ವರ ಅಧ್ಬುತ.. ತನೀಶ್ ಮಾರ್ಕೋಡರ ಹಾಸ್ಯ ಸಂಸ್ಥೆಯಲ್ಲಿ ಇರ್ನೋವ ಹಾಸ್ಯಗಾರ ತಯಾರಿಯಲ್ಲಿ ಇದ್ದಾನೆ ಎಂಬುದು ಸಂಶಯವೇ ಇಲ್ಲಾ..
ಹಾಗೇ ಹೀಗೆ ಹೇಳುತ್ತಾ ಹೋದರೆ ಉಳಿದ ಕಲಾವಿದರ ಶ್ರಮ ಹಾಗೂ ಪ್ರತಿಭೆ ಅಪಾರ ಅಗಣಿತ.. ಇವರೆಲ್ಲರ ಅಭಿನಯ ಪಾತ್ರ ನಿರ್ವಹಣೆ ಯಾವ ವೃತ್ತಿ ಪರ ಕಲಾವಿದರಿಗೂ ಕಮ್ಮಿ ಇಲ್ಲ...
ಇಂತಹ ಯುವ ಸಂಸ್ಥೆಗೆ ಹಾಗೆ ಇಂತ ಸಂಘ ನೋಡಿ ಪ್ರೋತ್ಸಾಹ ನೀಡಿದ ಸಂಯೋಜಕರಿಗೆ ನಿಮ್ಮೆಲ್ಲರ ಪ್ರೀತಿ ಹಾರೈಕೆ ಸದಾ ಇರಲಿ.ಇಂಥ ಸಂಸ್ಥೆ ಇನ್ನಷ್ಟು ಬೆಳಗಲಿ ಬೆಳೆಯಲಿ ಬೆಳೆದು ಬಂಧವಾಗಿ ನಮ್ಮೊಂದಿಗಿರಲಿ..ಶುಭವಾಗಲಿ
(ಭರತ ಗಾಣಿಗ ಕುಂದಾಪುರ )
#ಯಕ್ಷನಿನಾದ5 #ಯಕ್ಷಪಂಚಮಿ2026 #ಯಕ್ಷಗಾನ #ಕರ್ನಾಟಕದಕಲೆ #ಕರಾವಳಿಯಕಲೆ