Akshay Aknk

Akshay Aknk ಎಲ್ಲರೊಂದಿಗೆ ಬದುಕು. ಬದುಕು ಎಲ್ಲರೊಂದಿಗೆ...

ಅಪ್ಪಿ ತಪ್ಪಿ ಮಾಡಿದರೆ ಇವರಿಗೆ ಪಾರ್ಸೆಲ್ ಮಾಡಿಬಿಡಿ.
07/09/2025

ಅಪ್ಪಿ ತಪ್ಪಿ ಮಾಡಿದರೆ ಇವರಿಗೆ ಪಾರ್ಸೆಲ್ ಮಾಡಿಬಿಡಿ.

05/09/2025
ಗೋಡೆಗೆ ತೂಗಿದ ಅಂಕಲಿಪಿ ಪಠ.ಜೊತೆಗೆ ಬೈಗುಳದ ಒಟ ಒಟ.ತಲೆ ಗುಂಗಾಗಿ ಯಾರಿಗೆ ಬೇಕಿತ್ತು ಈ ಪಾಠ.ತೊದಲು ಬಿಳುತ್ತಿತ್ತು ಚಟಾ ಚಟಾ.ಬಡತನದ ಬೇಗೆಯ ಹಗೆ...
05/09/2025

ಗೋಡೆಗೆ ತೂಗಿದ ಅಂಕಲಿಪಿ ಪಠ.
ಜೊತೆಗೆ ಬೈಗುಳದ ಒಟ ಒಟ.
ತಲೆ ಗುಂಗಾಗಿ ಯಾರಿಗೆ ಬೇಕಿತ್ತು ಈ ಪಾಠ.
ತೊದಲು ಬಿಳುತ್ತಿತ್ತು ಚಟಾ ಚಟಾ.

ಬಡತನದ ಬೇಗೆಯ ಹಗೆ,
ತೀರುತ್ತಿತ್ತು ನಮ್ಮಮೇಲೆ ಹಾಗೆ.
ಕಾಣುತ್ತಿದ್ದಳು ನಮಗೆ ಕೂಗುವ ಕಾಗೆ.
ಗೊತ್ತಿರಲಿಲ್ಲ ಅವಳು ಬಿತ್ತುತ್ತಿದ್ದಳು ಅಕ್ಷರದ ಅಗೆ.

ನಗುವಿಲ್ಲ ನಲಿವಿಲ್ಲ, ತಲೆಯೆಲ್ಲ ಚಿತ್ತಾರ.
ಹೋಗದ ತಲೆಯಲ್ಲಿ ಏನು ಹಾಕಿದರು ವಿಸ್ತಾರ.
ಕಿಳರಿಮೆಗೆ ಕಾಲರಿವೆಯಂತೆ ಹಿಂಸೆ.
ಆದರು ಕಲಿತೆ ಬದುಕಿ ಪ್ರಶಂಸೆ. 🔴

ಗೋಡೆಯ ಮೇಲೆ ಅ ಆ ಇ ಈ ಪಠ, ಅದರ ಪಕ್ಕದಲ್ಲಿ ಒಂದು ಎರಡು ಅಂಕಿ ಸಂಖ್ಯೆಯ ಪಠ ಅದಕ್ಕೊಂದು ಕೆತ್ತಿ ರೆಡಿ ಮಾಡಿದ ಕೋಲು. ಎದುರಿಗೆ ತಲೆಗೆ ಹೋಗದ ಮಂಕು ತಲೆಬುರುಡೆ. ಮಧ್ಯದಲ್ಲಿ ನಮ್ಮ ಆಯಿ. ಕೋಲು ಹಿಡಿದು ಚಂಡಿಯೋ, ಮಹಾ ಕಾಳಿಯೋ ಅನ್ನುವ ಅನುಮಾನವಾದರು ಹೆಸರು ಭವಾನಿ. ಕೂಲಲ್ಲಿ ಹೊಡಿಬೇಡ ನೋವಾಗತ್ತೆ ಅನ್ನುವ ನಮ್ಮದಾದನ ಕೂಗಿಗೆ ಹಿತ್ತಲಿನಿಂದ ಆರಿಸಿ ಆರಿಸಿ ತರುತ್ತಿದ್ದ ತೆಳ್ಳಗಿನ ಸೆಳೆಯಾದರೂ ಹೊಡೆತ ಬಿದ್ದಾಗ ಮುದುಡಿಕೊಳ್ಳುವಾಗ ನವ ರಂಧ್ರಗಳು ಒಮ್ಮೆಲೆ ಬಿಗಿಯಾಗಿ ಮುಚ್ಚಿಕೊಳ್ಳುತ್ತಿದ್ದವು. ಜಾಸ್ತಿಯಾದಾಗ ಅಜ್ಜಿಯ ಹಿಂದೆ ಅಡಗಲು ಹೊದಾಗ ಅಜ್ಜಿಗೆ ಪ್ರದಕ್ಷಿಣೆ ಹಾಕಿದಂತೆ ಸುತ್ತುವರೆಯ ಬೇಕಿತ್ತು. ಅವಳೇನು ಅ ಆ ಇ ಈ ಮಾತ್ರ ಕಲಿಸಿಲ್ಲ ರಾಮಾಯಣ , ಮಹಾಭಾರತ ಕಥೆ ಉಪಕಥೆ, ಸ್ವಾತಂತ್ರ್ಯ ಹೋರಾಟಗಾರರ ಕಥೆಗಳು ಪುಸ್ತಕ ಹಿಡಿದು ಓದಿ ಹೇಳುವಾಗ ಮಾತ್ರ ಕಿವಿ ತಂಪಾಗುತ್ತಿತ್ತು. ಹಾಗಾಗಿಯೇ ಸ್ವಲ್ಪ ಅದರ ಬಗೆಗಿನ ಜ್ಞಾನ ಇದ್ದುದು ಮುಂದೆ ಕಲಿಯುವಾಗ ಸಹಾಯವಾಯಿತು. ಅದರಿಂದ ಹೈಸ್ಕೂಲ್ ನಲ್ಲಿ ರಾಮಾಯಣ ಕುರಿತು ಖಾಸಗಿ ಸಂಸ್ಥೆಯೊಂದು ಮಾಡುವ ಪರೀಕ್ಷೆಯಲ್ಲಿ ತಂಗಿಗೆ ರಾಜ್ಯಮಟ್ಟದಲ್ಲಿ ಬೆಳ್ಳಿ ಪದಕವು ಬಂದಿತ್ತು.

ಹಾಗೆ ದಾದ ಕಲಿಸಿದ ಭಜನೆ, ವಕೃತುಂಡಾ ಮಹಾಕಾಯ ಶ್ಲೋಕ ಬೆಳಿಗ್ಗೆಮತ್ತು ಸಂಜೆ ದೇವರ ಬೇಡಿಕೆಯಾಗಿತ್ತು. ಎಲ್ಲೋ ಒಂದು ಕಡೆ ಒಳ್ಳೆಯ ಬುನಾದಿಯೇನೋ ಬಿದ್ದಿತ್ತು. ಆದರೆ ಓದಿದಿನಿ ನಿಜ ಸರಿಯಾಗಿ ಓದದಿರುವುದು ನನ್ನ ತಪ್ಪೆ.

ಅದೊಂದು ದಿನ ಸಣ್ಣ ಸಣ್ಣ ಮಕ್ಕಳೆಲ್ಲ ಸೈಕಲ್ ಕಲಿತರು ನೀ ಯಾಕೆ ಹೆದರ್ತೆ, ಸೈಕಲ್ ಮುಟ್ಟೋದಿಲ್ಲ ಅಂತ ಮೊಳಕಂಡೆ ಮೇಲೆ ಬಿದ್ದ ದಾದನ ಏಟಿಗೆ ಆ ಕೋಲು ಮೂರುಪೀಸ್ ಆಗಿತ್ತು. ಅದೇ ದಿನ ಸಂಜೆಯೋಳಗೆ ಸೈಕಲ್ ಕಲಿತು ಅವರ ಮುಂದೆ ಹೊಡೆದು ತೋರಿಸಿದ್ದೆ. ಓದುಲು ಹಿಂದಿದ್ದರು ಎಂದಿಗೂ ಮಧ್ಯಂತರದ ಮೇಲೆ ಉತ್ತೀರ್ಣನಾಗುತ್ತಿದ್ದೆ. ಆದರೆ ಅದಕ್ಕಿಂತ ಹೆಜ್ಜಿನದು ಕಲಿಯುವ ಮತ್ತು ಅರ್ಥಿಕೊಳ್ಳುವ, ಅದನ್ನ ಕಾರ್ಯಗತವಾಗಿ ಜೀವನಕ್ಕೆ ರೂಪಿಸಿಕೊಳುವ ಶಕ್ತಿ ತುಂಬಾ ಕಲಿತಿದಿನಿ.

ಈ ಶಕ್ತಿ ಬೆಳೆಸಿದ ಪ್ರತಿ ಗುರುಗಳಿಗೂ ನಮನಗಳು. ಎಲ್ಲರಿಗೂ ಶಿಕ್ಷಕ ದಿನಾಚರಣೆಯಶುಭಾಶಯಗಳು. 🙏

ಹಿಯಾಳಿಸಿ, ಕಿರಿಕಿರಿ ಮಾಡಿ, ಆತ್ಮಸ್ಥೈರ್ಯ ಕುಗ್ಗಿಸಿ, ಕಲೆಳೆದವರಿಗೆಲ್ಲರಿಗೂ ನಮನಗಳು. ಯಾಕೆಂದರೆ ಹಿಂದೆ ಎಳೆದ ವಸ್ತುಗಳೇ ಮುಂದಕ್ಕೆ ಚಲಿಸುವುದು.😜 ಪ್ರತಿಹಂತದಲ್ಲೂ ನನಗೆ ಒಳ್ಳೆಯದೇ ಆಗಿದೆ. ಹಾಗಾಗಿಯಾರ ಮೇಲೂ ಬೇಸರವಾಗಲಿ ಮತ್ಸರವಾಗಲಿ ಕಂಡಿತಾ ಇಲ್ಲ.😊 ಒಂದಕ್ಷರ ಕಲಿಸಿದವರು ಗುರುಗಳು ಹಾಗಾಗಿ, ನೀವುಗಳು ಕೂಡಾ ನಮ್ಮ ದೊಡ್ಡ ಗುರುಗಳು. ಎಲ್ಲರಿಗೂ ಒಳ್ಳೆಯದಾಗಲಿ. ಎಲ್ಲರಿಗೂ ಸರ್ವಪಲ್ಲಿ ರಾಧಾಕೃಷ್ಣ ಅವರ ಹೆಸರಲ್ಲಿ ಆಚರಿಸುವ ಶಿಕ್ಷಕರದಿನಾಚರಣೆಯ ಶುಭಾಶಯಗಳು.

-AKNK

12/04/2025
12/04/2025
12/04/2025
ದೀಪ..... ಅವಳಾದರು ಎಷ್ಟು ಉರಿಯಬಹುದು. ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ನಾನೆ...ನಸುಕಿನ ಜಾವ ಐದು ಗಂಟೆ. ಎಳಲು ತಡವಾದುದ ದೀಪ ತನಗೆ ತಾನೇ ಬೈಕುಕ...
27/11/2024

ದೀಪ..... ಅವಳಾದರು ಎಷ್ಟು ಉರಿಯಬಹುದು. ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ನಾನೆ...

ನಸುಕಿನ ಜಾವ ಐದು ಗಂಟೆ. ಎಳಲು ತಡವಾದುದ ದೀಪ ತನಗೆ ತಾನೇ ಬೈಕುಕೊಳ್ಳುತ ಬಚ್ಚಲೆಡೆಗೆ ಓಡಿದಳು. ಕೈಕಾಲು ತೊಳೆದು ಬರುವ ಗಡಿಬಿಡಿಯಲ್ಲಿ ಮೊಣಕಾಲು ಕಾಲು ಹಿಂದಿನ ಬಾಗಿಲಿಗೆ. ಒಮ್ಮೆ ಜೀವ ಹೊದಂತಾದರೂ ಸಾವರಿಸಿಕೊಂಡು ಕಣ್ಣಲ್ಲಿ ಜೀನುಗು ಕಣ್ಣಿರಲ್ಲೇ ತುಟಿ ಕಚ್ಚಿಹಿಡಿದು ಗ್ಯಾಸ್ ಆನ್ ಮಾಡಿ ಅನ್ನಕ್ಕೆ ನೀರುಟ್ಟಳು. ತೆಂಗಿನಕಾಯಿ ತುರಿಯಲು ಮೆಟಗತ್ತಿಯಲ್ಲಿ ಕೂತಿದ್ದಾಳೆ. ಮನದ ದುಃಖವನ್ನೆಲ್ಲ ಆ ಕಾಯಿಯ ಮೇಲೆ ತೋರಿಸುತ್ತಿದ್ದಾಳೆ. ಹೃದಯದ ಕಟ್ಟೆ ತುಂಬಿ ದುಃಖ ಹೊರಗೆ ಬರುವ ಅನುಭವ. ಮಂಜಾಗುವ ಕಣ್ಣುಗಳನ್ನ ಒರೆಸಿಕೊಳ್ಳುತ ತನ್ನ ಕೆಲಸದಲ್ಲಿ ನಿರತಳಾಗಿದ್ದಾಳೆ. ದಿನಾ ಒಂದೇ ಕೆಲಸ ಮಾಡಿ ಮಾಡಿ ಬೇಸರ ಒಂದೆಡೆಗೆ ಮಾಡಬೇಕಾದ ಅನಿವಾರ್ಯತೆ ಇನ್ನೊಂದೆಗಾದರೆ ಹೊತ್ತುಕೊಂಡ ಜವಾಬ್ದಾರಿ ಮತ್ತೊಂದೆಡೆಗೆ. ಅಡುಗೆ ಕೆಲಸ ಮುಗಿಸಿ ರೆಡಿಯಾದಮೇಲೆ ತಂಗಿ ಎದ್ದು ತಿಂಡಿ ಮಾಡಿಕೊಟ್ಟಳು ಅರ್ಧ ತಿಂದು ಬಸ್ ಗೆ ಓಡಿದಳು. ಅರ್ಧ ತಿಂದ ತಟ್ಟೆ ನೋಡಿ ತಂಗಿ ಕಣ್ಣಲ್ಲೂ ನೀರು ಬಂತು.

ಬಸ್ ಗೆ ಬಂದು ಇಳಿದು ಅಂಗಡಿ ಸೇರಿದ ಮೇಲೆ ಅವಳು ಕೆಲಸವನ್ನ ಬಿಟ್ಟುಬೇರೇನು ಯೋಚಿಸುವುದಿಲ್ಲ. ಎಷ್ಟೇ ನೋವಿದ್ದರು ಅವಳು ಕೆಲಸಕ್ಕೆ ಹೋಗುವ ಅಂಗಡಿಯಲ್ಲಿ ನಗುತ್ತಾಳೆ ಬಂದವರು ಕೇಳು ವಸ್ತುಗಳನ್ನ ಬೇಗ ನೀಡುತ್ತಾಳೆ. ಓನರ್ ಅಕ್ಕನಿಗು ಇವಳೆಂದರೆ ಅಚ್ಚುಮೆಚ್ಚು. ಬಂದ ಜನರು ತಂಗಿ ಅಕ್ಕ ಅಂತ ಅವಳನ್ನ ತುಂಬಾ ಮೆಚ್ಚಿಕೊಳ್ಳುತ್ತಾರೆ.

ಮನೆಗೆ ತಿರುಗಿ ಬಂದಮೇಲೆ ಅದೇ ಕಥೆ ಆಳುಮುಖ. ಅವಳು ಮನೆಯಲ್ಲಿ ನಗುವುದು ಅಪ್ಪನೊಂದಿಗೆ ಮಾತ್ರ.

ದೀಪ ಹೆಚ್ಚಿಗೆ ಕಲಿತವಳೇನು ಅಲ್ಲ. ಪಿ.ಯು.ಸಿ. ನಲ್ಲಿ ಅಮ್ಮನಿಗೆ ಹುಷಾರಿಲ್ಲದೇ ಕಾಲೇಜು ಬಿಟ್ಟವಳು. ಅಪ್ಪ ಅಮ್ಮನ ಗಂಡು ಮಗುವಿನ ಆಸೆಗೆ ಹುಟ್ಟಿದ್ದು ಐದು ಮಕ್ಕಳು. ಗಂಡು ಹುಟ್ಟಿದರು ಬದುಕಲಿಲ್ಲ. ಜವಾಬ್ದಾರಿ ಹೊರುತಿರುವ ದೀಪ ಸ್ವಲ್ಪ ಮುಂಗೋಪಿಯಾದರೂ ಬಹಳ ದಿಟ್ಟೆ. ಹಿಡಿದ ಕೆಲಸ ಮಾಡುವ ಧೈರ್ಯ. ಅಪ್ಪನಿಗೆ ವಯಸ್ಸು ಆಗಿದ್ದರಿಂದ ಮನೆಯಲ್ಲಿ ಉಳಿಯುವಂತಾಗಿತು. ನಾಲ್ಕನೇ ಮಗಳಾದರೂ ಮನೆಯ ಆಡಳಿತ ನೋಡುತ್ತಿದ್ದಳು. ಮನೆಯ ಹೆಣ್ಣುಮಕ್ಕಳಿಗೆ ಪ್ಯಾಕ್ಟರಿ ಇಂದ ಗೇರುಬೀಜ ತಂದುಕೊಟ್ಟ ಅದನ್ನ ಕ್ಲೀನ್ ಮಾಡಿಸಿ ತಿರುಗಿ ಕೊಡುತ್ತ ಸ್ವಲ್ಪ ಹಣ ಕೂಡಿ ಮನೆಯ ಸ್ವಲ್ಪ ಆದಾಯ ಸೇರಿಸಿ ಇಬ್ಬರ ಮದುವೆ ಮಾಡಿದಳು. ಹೊರಗೆ ಸ್ವಲ್ಪ ವರ್ಷ ದುಡಿಯಲು ಹೊದಾಗ ಅಮ್ಮನಿಗೆ ಆರೋಗ್ಯ ಏರುಪೇರಾಗಿ ತಿರುಗಿ ಬಂದು ಆಸ್ಪತ್ರೆ ಅಲಿಯುವುದೇ ದಿನಚರಿಯಾಯಿತು. ಬಾವಂದಿರು ಧೈರ್ಯಕ್ಕೆ ನಿಂತರು ಎರಡು ಮೂರು ವರ್ಷ ಅದರಲ್ಲೇ ಕಳೆಯಿತು. ಯಾರು ಎಷ್ಟು ಮಾಡಲು ಸಾಧ್ಯ. ಒಂದು ಜಮೀನು ಕೂಡಾ ಮಾರಿದರು. ಉಳಿದ ಮನೆಯ ಜಮೀನಿನ ಆದಾಯ ಹೊಟ್ಟೆ ನಡೆಯುತ್ತಿತ್ತಾದರೂ ಒಮ್ಮೊಮ್ಮೆ ಅಮ್ಮನ ವೇದನೆಗೆ ಊಟ ಮಾಡುವವರು ಇರಲಿಲ್ಲ. ಅಮ್ಮ ಬದುಕಲಿಲ್ಲ. ಹೋಗುವ ಮೊದಲು ಅಮ್ಮ ದೀಪ ಕೈ ಹಿಡಿದು ಎಲ್ಲರ ಜವಾಬ್ದಾರಿ ನಿಂದು. ನೀನೇ ಎಲ್ಲರಿಗೂ ಒಂದು ದಾರಿ ತೋರಿಸಬೇಕು ಎಂದು ಮಾತುತೆಗೆದುಕೊಂಡಳು. ಅಮ್ಮನ ಚಿಂತೆಯಲ್ಲಿ ಆಸ್ಪತ್ರೆಗೆ ಸೇರಿದ್ದು ದೀಪ ಬದುಕಿ ಬಂದುದೆ ಪವಾಡ.
ವರ್ಷದೊಳಗೆ ಮತ್ತೊಂದು ಅಕ್ಕನ ಮದುವೆ ಜವಾಬ್ದಾರಿ ಮುಗಿಸಲೇ ಬೇಕಿತ್ತು. ಸಾಲ ಮಾಡಿ ಅಪ್ಪನ ಎದುರಲ್ಲಿ ಜವಾಬ್ದಾರಿ ಇಂದ ಮೂರನೇ ಅಕ್ಕನ ಮದುವೆ ಮಾಡಿದಳು. ಅಕ್ಕ ತಂಗಿಯವರು ಇವಳ ಮಾತಿಗೆ ಎದುರಾಡುತ್ತಿರಲಿಲ್ಲ. ತಂಗಿಯ ಮದುವೆ ಮಾಡಿದರೆ ಜವಾಬ್ದಾರಿ ತುಗಿಯಿತು ಅನ್ನುವುದಷ್ಟೇ ಅವಳ ತಲೆಯಲ್ಲಿ ಇದ್ದ ವಿಷಯ.

ಆದರೆ ಈಗ ತನ್ನಷ್ಟಕ್ಕೆ ತಾನು ಕುಳಿತು ಅಳುತ್ತಾಳೆ ಒಬ್ಬಂಟಿಯಾಗಿ ಏನೋ ಯೋಚಿಸುತ್ತಾಳೆ. ದೀಪ ಮೊದಲಿನಂತಿಲ್ಲ. ತನಗಾಗಿ ಯಾವ ಆಸೆಗಳಿರಲಿಲ್ಲ. ತನ್ನ ಬಗೆಗಿನ ಚಿಂತೆಗಳು ಇಲ್ಲದ ದೀಪ ಈಗ ತುಂಬಾ ಮಂಕಾಗಿದ್ದಾಳೆ. ಸದಾ ಹುರುಪಿನಿಂದ ಇರುತಿದ್ದ ಹೊಳಪು ಈಗ ಮಾಯವಾಗಿದೆ. ಒಮ್ಮೊಮ್ಮೆ ಅತ್ತಲಿಂದ ಇತ್ತಲಿಗೆ ಸುಮ್ಮನೇ ನಡೆಯುತ್ತಿರುತ್ತಾಳೆ. ಯಾರಿಗೂ ಕಾಣಿಸದಂತೆ ಅಳುತ್ತಿರುತ್ತಾಳೆ. ರಾತ್ರಿ ನಿದ್ರೆ ಬಾರದೆ ಹೊರಳುತ್ತಾಳೆ. ಬೆಳಿಗ್ಗೆ ಕಣ್ಣು ಕೆಂಪಾಗಿರುತದೆ ಮುಖ ಬಾಡಿರುತ್ತದೆ. ಜೀವನವೇ ಬೇಡ ಎನ್ನುವ ಬಾವನೆ ಅವಳಲ್ಲಿ. ಸೊಕ್ಕಿನ ಹೆಣ್ಣು ಜಂಬದ ಹೆಣ್ಣು ಅನಿಸಿಕೊಂಡರು ಎಂದು ಕೊರಗಿದವಳಲ್ಲ. ಯಾರನ್ನೂ ತಲೆ ಎತ್ತಿ ನೋಡದವಳು, ಮಾತಾಡಿಸುವ ಪ್ರಸಂಗ ಬಂದರು ಅಣ್ಣ ತಮ್ಮ ಅನ್ನದೇ ಮಾತು ಹೊರಡಿಸಿದವಳಲ್ಲ.

ವಯಸ್ಸಿನ ಸಮಯದಲ್ಲಿ ದೀಪ ಎಲ್ಲವನ್ನೂ ಸಾಧಿಸುವಂತ ದೀರೆ. ತನ್ನವರ ದಡ ಸೇರಿಸುವುದಷ್ಟೇ ಅವಳ ಕರ್ತವ್ಯ ಅಂದಕೊಂಡಿದ್ದಳು. ತನ್ನ ಬಗ್ಗೆ ಯೋಚನೆಗಳು ಇರಲಿಲ್ಲ. ಮದುವೆ ಆಗಬಾರದು ಅಂತ ಅಂದುಕೊಂಡಿದ್ದಳು. ಈಗ ವಯಸ್ಸು 40 ದಾಟುತ್ತಿದೆ. ಪ್ರಾಕೃತಿಕವಾಗಿ ಎಲ್ಲವೂ ದೂರವಾಗುತ್ತಿದೆ. ಕಳೆದುಕೊಂಡ ಅನುಭವವಾಗುತ್ತಿದೆ. ಎನು ಅರಿಯದೇ ಕಳೆದುಕೊಂಡ ಜೀವನದ ಬಗ್ಗೆ ಮರುಕವಾಗುತ್ತಿದೆ. ಮನಸ್ಸು ಆಸರೆ ಪ್ರೀತಿ ಬಯಸುತ್ತಿದೆ. ಎಲ್ಲರ ಕಷ್ಟ ಅರಿತ ತನಗೆ ತನ್ನ ಜೀವನ ವ್ಯರ್ಥ ಆದುದರ ಬಗ್ಗೆ ದುಃಖವಿದೆ. ಸಾಯುವಷ್ಟು ಮನಸ್ಸು ಒದ್ದಾಡಿದರು ಸಾಯಲು ಕೊನೆಯದೊಂದು ಜವಾಬ್ದಾರಿ ಉಳಿದುಕೊಂಡಿದೆ. ಆಗ ಬೇಡ ಎಂದು ತಿರಸ್ಕರಿಸಿದಕ್ಕೆ ಮನಸ್ಸು ಈಗ ಮರಗುತ್ತಿದೆ. ಮರೆಮಾಚಲು ಆಗದ ದುಃಖಕ್ಕೆ ಮುಖ ಮುಚ್ಚಿ ಅಳುವಂತಾಗಿದೆ. ಹೇಳಿಕೊಳ್ಳಲು ಅಮ್ಮನೂ ಇಲ್ಲ. ಅಪ್ಪ ಹಾಸಿಗೆ ಹಿಡಿದಿದ್ದಾನೆ ಅವನ ಸೇವೆ ತುಟಿಕಚ್ಚಿ ಮಾಡುತ್ತಿದ್ದಾಳೆ. ದೀಪ ಮನೆಗೆ ಬಂದೊಡನೆ ನಗುವ ಅಪ್ಪನ ಎದರು ಅಳಲಂತು ಸಾದ್ಯವಿಲ್ಲ.

ವಯಸ್ಸು ಇರುವಾಗ ಅದರ ಬೆಲೆ ತಿಳಿಯಲಿಲ್ಲ. ಆಗ ಹಿಡ ಕೆಲಸ ಮಾಡುವುದಷ್ಟೇ ಉದ್ದೇಶ ಆಗಿತ್ತು. ಸಾಧಿಸಿದಂತೆ ಸ್ವಲ್ಪ ಸ್ವಲ್ಪ ಅಹಃ ತಲೆಗೆ ಏರುತ್ತಾ ಹೊಯಿತು. ಮತಷ್ಟು ಸಾಧಿಸಿ ಬೇಸ್ ಅನಿಸಿಕೊಳ್ಳುವ ಇರಾದೆ. ಏರಿದ ಪ್ರತಿ ಮೆಟ್ಟಿಲುಗಳು ನಮ್ಮ ಮನಸ್ಸು ಮತ್ತು ಬೆನ್ನು ಏರಿಸಿಕೊಂಡು ನಿಂತು ದೊಡ್ಡ ವ್ಯಕ್ತಿಗಳಂತೆ ಅನಿಸಿಬಿಟ್ಟಿತು. ಕೊನಗೆ ಒಮ್ಮೆ ಕಳೆದುಕೊಂಡಿರುವ ಜೀವನ ನೆನಪಾದಾಗ ಒಂಟಿಯಾಗಿಸಿಬಿಡುತ್ತದೆ.

ಅಪ್ಪನ ಆರೈಕೆ, ಔಷಧಿ ಖರ್ಚು, ಮನೆ ಜವಾಬ್ದಾರಿ, ತಂಗಿ ಮದುವೆ ಇಷ್ಟಂತು ಅವಳು ಮುಗಿಸಬುದು. ಆದರೆ ಕಳೆದಿರುವ ಅವಳ ಜೀವನ ಇನ್ನೆಂದು ಬರಲಾರದು. ದೀಪ ಹೆಸರಂತೆ ಆ ಮನೆಗೆ ತಾನು ಉರಿದು ಬೆಳಕಾದವಳು. ಆಳಂತೆ ದುಡಿದವಳು, ದುಡಿಸಿದವಳು ಇಂದು ಅಳುವಾಗಿ ಹೋಗುತ್ತಿದ್ದಾಳೆ.

Address

Kumta

Website

Alerts

Be the first to know and let us send you an email when Akshay Aknk posts news and promotions. Your email address will not be used for any other purpose, and you can unsubscribe at any time.

Share

Category