Pakka Local Digital

Pakka Local Digital News

13/08/2026

ಮಾಜಿ ಸಚಿವ ನಾಗೇಂದ್ರ ಪುನರ್ ಸೇರ್ಪಡೆ ಮಾಡಿದ್ದಕ್ಕೆ ಬಿಜೆಪಿ‌ ವಿರೋಧ; Roopali Naik

ಕಾರವಾರ: ಬಹುಕೋಟಿ ವಾಲ್ಮೀಕಿ ನಿಗಮದ ಹಗರಣದ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಬಿ. ನಾಗೇಂದ್ರ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿರುವುದನ್ನು ಖಂಡಿಸಿ ಬಿಜೆಪಿ ಕಾರವಾರದಲ್ಲಿ ಪತ್ರಿಕಾಗೋಷ್ಠಿ ನಡೆಸಿದೆ.
ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಹಾಗೂ ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರು ಕಾರವಾರದ ಜಿಲ್ಲಾ ಪತ್ರಿಕಾಭವನದಲ್ಲಿ ಗುರುವಾರ ಮಾತನಾಡಿ, "186 ಕೋಟಿ ರೂಪಾಯಿ ಹಗರಣದ ತನಿಖೆ ಕೋರ್ಟ್ ಹಾಗೂ ಇಡಿಯಲ್ಲಿ ನಡೆಯುತ್ತಿರುವಾಗಲೇ ನಾಗೇಂದ್ರ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಂಡಿರುವುದು ಅಕ್ಷಮ್ಯ. ಕಾಂಗ್ರೆಸ್ ಸರ್ಕಾರ ಯಾರ ಹಿತಕ್ಕಾಗಿ ಈ ರೀತಿ ಮಾಡುತ್ತಿದೆ?" ಎಂದು ಪ್ರಶ್ನಿಸಿದ್ದಾರೆ.
ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಅಧಿವೇಶನದಲ್ಲಿ ಕಲಾಪದ ಬಾವಿಗಿಳಿದು ಹೋರಾಟ ನಡೆಸಲಿದ್ದು, ಕಾರವಾರ ಜಿಲ್ಲೆಯಲ್ಲೂ ಡಿಸಿ ಕಚೇರಿ ಮುಂಭಾಗ ಹಾಗೂ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಹಂತ ಹಂತವಾಗಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

08/08/2026

... Read more

07/08/2026

ಮಂಕಾಳು ವೈದ್ಯಗೆ ಸಚಿವ ಸ್ಥಾನ ಔಟ್! ಕರಾವಳಿಯಲ್ಲಿ ಭುಗಿಲೆದ್ದ ಮೀನುಗಾರರ ಆಕ್ರೋಶ! | Karwar News | Mankalu Vaidya


​ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಮೀನುಗಾರ ಸಮುದಾಯ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಶಾಸಕ ಮಂಕಾಳು ವೈದ್ಯ ಅವರ ಹೆಸರು ಸಚಿವ ಪಟ್ಟಿಯಲ್ಲಿದ್ದು, ಕೊನೆ ಕ್ಷಣದಲ್ಲಿ ಕೈಬಿಟ್ಟಿರುವುದಕ್ಕೆ ಸರ್ಕಾರ ಮತ್ತು ಕಾಂಗ್ರೆಸ್ ವರಿಷ್ಠರ ವಿರುದ್ಧ ಮೀನುಗಾರ ಸಂಘಟನೆಗಳು ಕಡಕ್ ಎಚ್ಚರಿಕೆ ನೀಡಿವೆ.
​ಉತ್ತರ ಕನ್ನಡ ಜಿಲ್ಲೆಗೆ ಸಚಿವ ಸ್ಥಾನ ನೀಡದೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿರುವ ಮುಖಂಡರು, ಮುಖ್ಯಮಂತ್ರಿಗಳು ತಕ್ಷಣವೇ ಈ ನಿರ್ಧಾರವನ್ನು ಪುನರ್ ಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾರೆ.

01/08/2026

ಕಟ್ಟಿಗೆ ರಾಶಿಯಲ್ಲಿತ್ತು ಕೊಳಕುಮಂಡಲ!

ಮುಂಡಗೋಡ ತಾಲೂಕಿನ ಪಾಳಾ ಗ್ರಾಮದ ಸಂತೋಷ ಕಾಕಟಿಕರ್ ಅವರ ಮನೆಯಲ್ಲಿ ವಿಷಕಾರಿ ಕೊಳಕುಮಂಡಲ (ರಸೆಲ್ ವೈಪರ್) ಹಾವು ಕಾಣಿಸಿಕೊಂಡು ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.
ಮಾಹಿತಿ ತಿಳಿದ ತಕ್ಷಣ ಗಸ್ತು ಅರಣ್ಯ ಪಾಲಕ ಮುತ್ತುರಾಜ ಹಳ್ಳಿ ಸ್ಥಳಕ್ಕೆ ಆಗಮಿಸಿ, ಸುರಕ್ಷಿತವಾಗಿ ಹಾವನ್ನು ರಕ್ಷಿಸಿದರು. ಬಳಿಕ ಅರಣ್ಯ ಸಿಬ್ಬಂದಿ ಹಾವನ್ನು ಅದರ ಸಹಜ ಆವಾಸ ಸ್ಥಾನಕ್ಕೆ ಬಿಟ್ಟು ಮಾನವ-ವನ್ಯಜೀವಿ ಸಂಘರ್ಷ ತಪ್ಪಿಸುವಲ್ಲಿ ಯಶಸ್ವಿಯಾದರು.
ಮನೆಯ ಸುತ್ತಮುತ್ತ ಹಾವು ಕಂಡುಬಂದರೆ ಅದನ್ನು ಹಿಡಿಯಲು ಯತ್ನಿಸದೆ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

#ಮುಂಡಗೋಡ #ಪಾಳಾಗ್ರಾಮ #ಹಾವುರಕ್ಷಣೆ

30/07/2026

ಕಾವೇರಿ ನೀರು ಬಿಡುಗಡೆ ಖಂಡಿಸಿ ಕರವೇ ಪ್ರತಿಭಟನೆ: ಖಾಲಿ ಕೊಡ ಹಿಡಿದು ಆಕ್ರೋಶ

ಕಾರವಾರ: ತಮಿಳುನಾಡಿಗೆ ಪ್ರತಿದಿನ 3,500 ಕ್ಯೂಸೆಕ್ ಕಾವೇರಿ ನೀರು ಹರಿಸುವುದನ್ನು ಖಂಡಿಸಿ ಕರವೇ ಕಾರ್ಯಕರ್ತರು ಕಾರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಖಾಲಿ ಕೊಡ ಹಿಡಿದು ಪ್ರತಿಭಟನೆ ನಡೆಸಿದರು. ರಾಜ್ಯದಲ್ಲೇ ನೀರಿನ ಕೊರತೆ ಇರುವಾಗ ತಮಿಳುನಾಡಿಗೆ ನೀರು ಬಿಡುವುದು ಅನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿ, ನೀರು ಬಿಡುಗಡೆ ತಕ್ಷಣ ನಿಲ್ಲಿಸುವಂತೆ ಆಗ್ರಹಿಸಿದರು.

#ಕಾರವಾರ #ಕಾವೇರಿನೀರು #ಕರವೇ #ಕರ್ನಾಟಕ #ತಮಿಳುನಾಡು #ಪ್ರತಿಭಟನೆ #ಕನ್ನಡಿಗರು #ನೀರಿನಬಿಕ್ಕಟ್ಟು

23/07/2026

ಹಳದೀಪುರ ಮಠದ ಹಣಕಾಸು ಅಕ್ರಮ ಆರೋಪ: ತನಿಖೆಗೆ ಅಜಿತ್ ಪೊಕಳೆ ಆಗ್ರಹ!

ಹೊನ್ನಾವರದ ಹಳದೀಪುರದ ಕೃಷ್ಣಾಶ್ರಮ ಮಠದ ಹಣ ಹಾಗೂ ಸ್ಥಿರ ಆಸ್ತಿ ನಿರ್ವಹಣೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿರುವ ಸದಾಶಿವಗಡದ ಅಜಿತ್ ಪೊಕಳೆ, ಈ ಕುರಿತು ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ್ದಾರೆ.
ಕಾರವಾರದ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು, ಮಠದ ಆಡಳಿತಕ್ಕೆ ಸಂಬಂಧಿಸಿದಂತೆ ಈಗಾಗಲೇ ಅಧಿಕಾರಿಗಳಿಗೆ ದೂರು ನೀಡಲಾಗಿದ್ದರೂ ಸೂಕ್ತ ಕ್ರಮವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ, ಧಾರ್ಮಿಕ ನಿಯಮಗಳಿಗೆ ವಿರುದ್ಧವಾಗಿ ಚಾತುರ್ಮಾಸ ಆಯೋಜಿಸಲಾಗುತ್ತಿದೆ ಎಂದು ಆಕ್ಷೇಪಿಸಿದ ಅವರು, ಮಠದ ಆವರಣದಲ್ಲಿರುವ ಪ್ರಾಥಮಿಕ ಶಾಲೆಯನ್ನು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರ್ಕಾರಿ ಶಾಲೆಗೆ ವಿಲೀನಗೊಳಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

22/07/2026

ಕರಾವಳಿ ಭದ್ರತೆಗೆ 'ಐಎನ್‌ಎಸ್ ಮಾಲ್ವಣ್' ಬಲ! ⚓🇮🇳

ಭಾರತೀಯ ನೌಕಾಪಡೆಗೆ ಅತ್ಯಾಧುನಿಕ ಜಲಾಂತರ್ಗಾಮಿ ನಿಗ್ರಹ ಯುದ್ಧನೌಕೆ 'ಐಎನ್‌ಎಸ್ ಮಾಲ್ವಣ್' (INS Malvan) ಕಾರವಾರದ ಕದಂಬ ನೌಕಾನೆಲೆಯಲ್ಲಿ ಅಧಿಕೃತವಾಗಿ ಸೇರ್ಪಡೆಗೊಂಡಿದೆ!
ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್ ಅವರು ಈ ನೌಕೆಯನ್ನು ಲೋಕಾರ್ಪಣೆ ಮಾಡಿದ್ದು, ಇದರಿಂದ ದೇಶದ ಕರಾವಳಿ ಕಣ್ಗಾವಲು ಮತ್ತು ಭದ್ರತಾ ಸಾಮರ್ಥ್ಯ ಮತ್ತಷ್ಟು ಹೆಚ್ಚಲಿದೆ. 'ಆತ್ಮನಿರ್ಭರ ಭಾರತ' ಅಭಿಯಾನದಡಿ ಕೊಚಿನ್ ಶಿಪ್‌ಯಾರ್ಡ್ ನಿರ್ಮಿಸಿರುವ ಈ ಯುದ್ಧನೌಕೆಯಲ್ಲಿ ಶೇ. 80ಕ್ಕೂ ಅಧಿಕ ಸ್ವದೇಶಿ ತಂತ್ರಜ್ಞಾನ ಹಾಗೂ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಲಾಗಿದೆ. ಛತ್ರಪತಿ ಶಿವಾಜಿ ಮಹಾರಾಜರ ಕಡಲ ಪರಂಪರೆಯ ಸಂಕೇತವಾಗಿ ಇದಕ್ಕೆ 'ಮಾಲ್ವಣ್' ಎಂದು ಹೆಸರಿಡಲಾಗಿದೆ.

20/07/2026

ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವ ಷಡ್ಯಂತ್ರ: ಕೇಂದ್ರದ ವಿರುದ್ಧ ಅಂಜಲಿ ನಿಂಬಾಳಕರ್ ಆರೋಪ
ಎಸ್.ಐ.ಆರ್ ಪ್ರಕ್ರಿಯೆ ಬಳಸಿ ಕಾಂಗ್ರೆಸ್ ಬೆಂಬಲಿಗರ ಮತಗಳನ್ನು ಕೈಬಿಡುವ ಷಡ್ಯಂತ್ರ ಕೇಂದ್ರದ ಬಿಜೆಪಿ ಸರ್ಕಾರದ್ದು ಎಂದು ಎಐಸಿಸಿ ಕಾರ್ಯದರ್ಶಿ ಅಂಜಲಿ ನಿಂಬಾಳಕರ್ ಕಾರವಾರದಲ್ಲಿ ಆರೋಪಿಸಿದ್ದಾರೆ. ಬಂಗಾಳ, ಬಿಹಾರ, ಯುಪಿ ಸೇರಿ ಹಲವು ರಾಜ್ಯಗಳಲ್ಲಿ ಕೋಟ್ಯಂತರ ಮತದಾರರ ಹೆಸರು ಡಿಲೀಟ್ ಆಗಿರುವುದನ್ನು ಪ್ರಸ್ತಾಪಿಸಿದ ಅವರು, ಮಹಿಳಾ ಮೀಸಲಾತಿ ಬಿಲ್ ನೆಪದಲ್ಲಿ ಬರುತ್ತಿರುವ ಕ್ಷೇತ್ರ ಮರುವಿಂಗಡಣೆಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ. 75 ರಷ್ಟು ವೋಟರ್ ಐಡಿ ಡಿಜಿಟಲೈಸೇಷನ್ ಆಗಿದ್ದು, ಆಗಸ್ಟ್ 8ರ ಗಡುವಿನೊಳಗೆ ಪಟ್ಟಿಯಲ್ಲಿ ಹೆಸರು ಪರಿಶೀಲಿಸಿಕೊಳ್ಳುವಂತೆ ಜನರಿಗೆ ಮನವಿ ಮಾಡಿದರು.

Anjali Nimbalkar, Congress Karwar, SIR Voter List, Karnataka Congress News, Vote Deletion BJP, Women Reservation Bill, Delimitation Bill Opposition, Uttara Kannada News, Bheemanna Naik, Siddaramaiah DK Shivakumar, AICC Secretary, ಎಸ್ಐಆರ್ ಮತದಾರರ ಪಟ್ಟಿ, ಕಾಂಗ್ರೆಸ್ ಕಾರವಾರ, ಕನ್ನಡ ಸುದ್ದಿ

19/07/2026

ಕೇಣಿ ಬಂದರು ವಿರೋಧಿ ಹೋರಾಟ ತೀವ್ರ: ಜು.22ರಂದು ಬೃಹತ್ ಪಾದಯಾತ್ರೆ, ಅನುಮತಿ ಸಿಗದಿದ್ದರೆ ಅಮರಣಾಂತ ಉಪವಾಸ!

ಕೇಣಿ ಖಾಸಗಿ ಗ್ರೀನ್‌ಫೀಲ್ಡ್ ಆಳಸಮುದ್ರ ಬಂದರು ಯೋಜನೆ ವಿರೋಧಿಸಿ ಹೋರಾಟ ಮತ್ತಷ್ಟು ತೀವ್ರಗೊಂಡಿದೆ. ಜುಲೈ 22ರಂದು ಅಂಕೋಲಾದಿಂದ ಕಾರವಾರದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪಾದಯಾತ್ರೆ ನಡೆಸಲಾಗುವುದು ಎಂದು ಹೋರಾಟಗಾರರು ಘೋಷಿಸಿದ್ದಾರೆ. ಪಾದಯಾತ್ರೆಗೆ ಅನುಮತಿ ನೀಡದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಈ ಯೋಜನೆಯಿಂದ ಅಂಕೋಲಾ, ಗೋಕರ್ಣ ಹಾಗೂ ಕಾರವಾರ ಭಾಗದ 103ಕ್ಕೂ ಹೆಚ್ಚು ಹಳ್ಳಿಗಳಿಗೆ ಹಾನಿಯಾಗಲಿದೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ. ಮೀನುಗಾರರು, ರೈತರು, ವಿದ್ಯಾರ್ಥಿಗಳು, ಕಾರ್ಮಿಕರು ಸೇರಿದಂತೆ ವಿವಿಧ ಸಂಘಟನೆಗಳು ಪಾದಯಾತ್ರೆಗೆ ಬೆಂಬಲ ಸೂಚಿಸಿರುವುದಾಗಿ ತಿಳಿಸಲಾಗಿದೆ.

ಈ ಬೆಳವಣಿಗೆಯ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.

#ಕೇಣಿಬಂದರು

17/07/2026

ಕಾರವಾರದ ಸಮುದ್ರದಲ್ಲಿ ಧುಮುಕಿದ ಮಾನಸಿಕ ಅಸ್ವಸ್ಥ!
ರಕ್ಷಣೆ ಮಾಡಿದ ಕರಾವಳಿ ಕಾವಲುಪಡೆ!

Address

Karwar
Karwar
581301

Alerts

Be the first to know and let us send you an email when Pakka Local Digital posts news and promotions. Your email address will not be used for any other purpose, and you can unsubscribe at any time.

Shortcuts

Share

Category