31/05/2026
೩೦೦೦ ಕ್ಕೂ ಮಿಗಿಲು ಶಿವ ದೇವಾಲಯ ಜೊತೆಗೆ ೧೨ ಜ್ಯೋತಿರ್ಲಿಂಗಗಳ ಪುನರ್ ಪ್ರತಿಸ್ಠಾಪಿಸಿದ,ಅನಾಮತ್ತು ೩ ದಶಕ ರಾಜ್ಯವಾಳಿದ, ಮಹಾ ಹಿಂದೂ ಸಾಮ್ರಾಜ್ಯದ ನಾಯಕಿ ಹಾಗು ಹೆಮ್ಮೆ ವೀರಮಾತೆ ಅಹಲ್ಯಾ ಬಾಯಿ ಹೋಳ್ಕರ್ ಜನ್ಮ ದಿನ ಇವತ್ತು. ದುರ್ದಾಸ ಗಂಡ ಮತ್ತು ಲಂಪಟ ಮಕ್ಕಳ ಮಧ್ಯೆ ನಿಗಿನಿಗಿ ಯೌವ್ವನದಲ್ಲೆ ವಿಧವೆಯಾದ ತಾಯಿ, ಟೊಂಕ ಕಟ್ಟಿದ್ದು ನೆಲದ ಉನ್ನತಿಗಾಗಿ. ವಿಶ್ವ ಪ್ರಸಿದ್ಧ ಕಾಶಿ ಮಂದಿರ ಪುನರುದ್ಧಾರಗೊಂಡಿದ್ದೇ ಅಹಲ್ಯಾಬಾಯಿ ಯಿಂದ. ಇವತ್ತಿನ ಗಂಗಾರತಿಯ ದ್ವಾದಶಾಶ್ವಮೇಧ ಘಾಟ ಕಟ್ಟಿಸಿದ್ದೇ ಅಹಲ್ಯಾಬಾಯಿ. ಔರಂಗಜೇಬ್ ನೆಲಸಮ ಮಾಡಿ, ಸರಿಯಾದ ಒಂದು ಬುನಾದಿ ನಿರ್ಮಿಸಿಕೊಳ್ಲಲೂ ಬಾರದೇ ಅದೇ ತಳಹದಿಯ ಮೇಲೆ ಮೇಲೆ ತನ್ನ ಮಸೀದಿ ನಿರ್ಮಿಸಿಕೊಂಡ ಮೊಘಲರಿಗೆ ಕೊನೆಯವರೆಗೂ ಒಂದೇ ಒಂದು ಸ್ವತ: ಮಸೀದಿ ನಿರ್ಮಿಸಸುವ ತಂತ್ರಜ್ನಾನ ಇರಲೇ ಇಲ್ಲ. ಸುಮಾರು ನೂರು ವರ್ಷಕಾಲ ನೆಲಸಮವಾಗಿದ್ದ ಕಾಶಿ ಮಂದಿರವನ್ನು ಪುನ: ನಿರ್ಮಿಸಿದ್ದು ಈ ತಾಯಿ.
ಗಂಗೋತ್ರಿ, ರಾಮೇಶ್ವರಂ, ದ್ವಾರಕಾ, ಗಯಾ ಹೀಗೆ ನಾಲ್ಕೂ ದಿಕ್ಕುಗಳ ಕೊನೆಯವರೆಗೂ ಮೊಘಲ್ ದಾ ಳಿಗೆ ಸಿಲುಕಿ, ದುರುಳರು ಹಾಳುಗೆಡುವಿದ್ದ ಎಲ್ಲ ದೇವಸ್ಥಾನಗಳನ್ನು ಪುನರ್ ನಿರ್ಮ್ಸಿದ ಕಾರ್ಯ ಕೈಗೊಳ್ಳದಿದ್ದರೆ ಅವೆಲ್ಲ ಇವತ್ತಿಗೂವರೆಗೂ, ನಮ್ಮ ನಿಮ್ಮ ಕೈಗೆ ಸಿಕ್ಕಲು ರಾಮ ಮಂದಿರದ ಹೋರಾಟದಂತೆಯೇ ಆಗುತ್ತಿತ್ತು.
ನೆಲಸಮವಾಗಿದ್ದ, ಮೊಘಲರಿಂದ ಹದಿನೆಂಟು ಬಾರಿ ದಾಳಿಗೊಳಗಾಗಿದ್ದ ಸೋಮನಾಥ ದೇವಾಲಯ ಪುನರ್ ಪ್ರತಿಸ್ಠಾಪನೆಯಾದದ್ದು ೧೭೮೩ ರಲ್ಲಿ ಇದೇ ತಾಯಿಯ ಬೆಂಬಲದಿಂದ. ಪುರಿಯಲ್ಲಿರುವ ರಾಮಚಂದ್ರ ದೇವಸ್ಥಾನ, ಅಯೋಧ್ಯೆಯ ಸರಯೂ ಘಾಟ್, ಗಯಾದ ವಿಷ್ಣುಪದ್ ದೇವಾಲಯ, ರಾಮೇಶ್ವರಂನ ಹನುಮಾನ್ ದೇವಸ್ಥಾನ ಉತ್ತರ ಭಾರತದ ಪ್ರಮುಖ ದೇವಸ್ಥಾನ ಮತ್ತು ತೀರ್ಥ ಕ್ಷೇತ್ರಗಳೇನಾದರೂ ನಮಗೆ ಸೂಕ್ತವಾಗಿ ಲಭ್ಯವಿದ್ದಿದ್ದೇ ಆದರೆ ಅದಕ್ಕೆ ಕಾರಣ ಅಹಲ್ಯಾಬಾಯಿ ಹೋಳ್ಕರ್. ಶ್ರೀನಗರ, ಮಹಾಬಲೇಶ್ವರ,ರಾಮೇಶ್ವರಂ, ಸೋಮನಾಥ್, ಹರಿದ್ವಾರ, ಪ್ರಯಾಗ, ಬದ್ರಿನಾಥ್, ರಿಷಿಕೇಶ ವಾರಣಾಸಿ, ನೈಮಿಶರಣ್ಯ, ಓಂಕಾರೇಶ್ವರ, ಪುಣೆ, ಇಂದೋರ್, ಪುರಿ, ನಾಸಿಕ್, ಕೇದಾರನಾಥ, ಭೀಮಾಶಂಕರ್, ತ್ರಿಂಬಕೇಶ್ವರದಲ್ಲಿ ಅಹಲ್ಯಾಬಾಯಿ ಯ ಬೆಂಬಲದ ದೇವಸ್ಥಾನಗಳು ಹಿಂದೂ ಧರ್ಮದ ವಿಜಯದ ಸಂಕೇತ ವಾಗಿ ಕೇಸರಿ ಪಟಪಟಿಸುತ್ತಿದೆ. ಸತತ ಮೂರು ದಶಕದಲ್ಲಿ ಇನ್ನಿಲ್ಲದಂತೆ ಶಿಲ್ಪಿಗಳನ್ನು ಪೋಶಿಸಿ ಸಹಜ ಹೊಡೆತಕ್ಕೆ ಅಲುಗದ ದೇವಸ್ಥಾನ ಮತ್ತು ನಿಲಯಗಳನ್ನು ನಿರ್ಮಿಸಿದ ಇನ್ನೊಬ್ಬ ಮಹಿಳೆ ಇತಿಹಾಸದಲ್ಲಿ ಇಲ್ಲ.
ಮಹಾರಾಷ್ಟ್ರದ ಅಹ್ಮದ್ನಗರ ಜಿಲ್ಲೆಯ ಧನಗರ್ ಕುಟುಂಬದ ಅಹಲ್ಯಾಬಾಯಿ (೧೭೭೫) ಆ ಕಾಲದಲ್ಲೇ ಓದಿನ ಮಹತ್ವ ಅರಿತಿದ್ದ ಕಲಿತ ಮಹಿಳೆ. ಚಿಕ್ಕಂದಿನಲೇ ಇದ್ದ ದಿಟ್ಟತನದಿಂದ ಇಂಧೋರ್ ಪೇಶ್ವೇಯ ಮನೆಯ ಸೊಸೆಯಾದ ( ಮಲ್ಹಾರ್ ರಾವ ಹೋಳ್ಕರ್ ಮಗ ಖಂಡೆರಾವ್ ನ ಪತ್ನಿ) ವೀರ ಮಾತೆ ಹಾಸನ ಗದ್ದುಗೆ ಹಿಡಿದದ್ದು ಅನಿವಾರ್ಯವಾಗಿ ೧೭೬೭ ರಲ್ಲಿ . ಕೆಳ ಜಾತಿಯ ವೀರನೊಬ್ಬನೊಂದಿಗೆ ಮಗಳ ಮದುವೆ ಮಾಡಿ ಜಾತಿ ಪದ್ಧತಿಯ ವಿರುದ್ಧ ಪ್ರಾಯೋಗಿಕ ನಿರ್ಧಾರ, ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಪಾಲು ಇವೆಲ್ಲವನ್ನು ಜಾರಿಗೆ ತಂದವಳು.
ಆ ತಾಯಿಯ ಚರಣಕ್ಕೆ ನಮಸ್ಕಾರ