Sakala rangahejje trust-R

Sakala rangahejje trust-R theatre culture activities

06/06/2026

5 ನಾಟಕಗಳಲ್ಲಿ 4ನೇ ನಾಟಕ ಪ್ರದರ್ಶನಗೊಂಡ
ಚಿತ್ರೀಕರಣದ ತುಣುಕುಗಳು.
ಚಿಕ್ಕಬಳ್ಳಾಪುರದ ಕನ್ನಡ ಭವನದಲ್ಲಿ “ವಸಂತ ಚಿಟ್ಟೆಗಳು” ಬಣ್ಣ ಹಚ್ಚಿದ ಸಂದರ್ಭ. ಪಾತ್ರಧಾರಿಗಳ ಹಾರಾಟ, ಮಾತು ಮಾತಿನ ನಡುವಿನ ಮನರಂಜನೆಯ ಹಾದಿಯಲ್ಲಿ ಪ್ರೇಕ್ಷಕರನ್ನು ಕೊಂಡೊಯ್ಯುವ ಸಾಹಸಮಯ ಪ್ರದರ್ಶನ.

ವೈಜ್ಞಾನಿಕ ಶೈಕ್ಷಣಿಕ ನಾಟಕ
ನಾಟಕ : ಒಂದು ದಿನ ಒಂದು ಗಂಟೆ
ರಚನೆ : ಎಂ.ಮಹಾದೇವಪ್ಪ ತಾಳಗುಂದ
ಸಂಗೀತ ಸಂಯೋಜನೆ : ದಿಗ್ವಿಜಯ ಹೆಗ್ಗೋಡು
ಸಂಗೀತ ಸಾಂಗತ್ಯ : ದಿಲೀಪ್ ಕುಮಾರ್.ಆ‌ರ್
ಚಿತ್ರ ವಿನ್ಯಾಸ : ಸತೀಶ್. ಸಿ ಎಲ್ (ಕಲಾ ಶಿಕ್ಷಕರು)
ವಸ್ತ್ರ ವಿನ್ಯಾಸ & ನಿರ್ದೇಶನ : ಕವಿತಾ ಎಸ್, ಮೈಸೂರು
ಮಾಗ೯ದಶ೯ನ : ದಿಲೀಪ್ ಕುಮಾರ್.ಆರ್ (ಚಿಕ್ಕಬಳ್ಳಾಪುರ)

30/05/2026

ಭಾಗ : 3
ಮಕ್ಕಳ ಸಂಭ್ರಮದ ಚಿತ್ರೀಕರಣದ ತುಣುಕುಗಳು….
ಶಿಬಿರದಲ್ಲಿ ಕಲಿತ ಹಾಡುಗಳ ರಸದೌತಣ, ತೊದಲು ನುಡಿಗಳ ಸೊಗಸು, ಸಂಗೀತದ ಆರೋಹಣ-ಅವರೋಹಣಗಳ ಮನಮೋಹಕ ಕ್ಷಣಗಳು. ಪ್ರೇಕ್ಷಕರ ಚಪ್ಪಾಳೆಗಳ ಸುರಿಮಳೆ ನಡುವೆ ಮೂಡಿದ ಈ ನೆನಪುಗಳನ್ನು ಮತ್ತೊಮ್ಮೆ ಕೇಳಿ, ನೋಡಿ, ಅನುಭವಿಸಿ.

ನೂರಾರು ಮಕ್ಕಳ ಪ್ರತಿಭೆಯ ಅನಾವರಣಕ್ಕೆ ನೀವು ಸಹ ಸಾಕ್ಷಿಯಾಗಿರಿ.

28/05/2026

5 ನಾಟಕಗಳಲ್ಲಿ 3ನೇ ನಾಟಕ ಪ್ರದರ್ಶನಗೊಂಡ
ಚಿತ್ರೀಕರಣದ ತುಣುಕುಗಳು.
ಚಿಕ್ಕಬಳ್ಳಾಪುರದ ಕನ್ನಡ ಭವನದಲ್ಲಿ “ವಸಂತ ಚಿಟ್ಟೆಗಳು” ಬಣ್ಣ ಹಚ್ಚಿದ ಸಂದರ್ಭ. ಪಾತ್ರಧಾರಿಗಳ ಹಾರಾಟ, ಮಾತು ಮಾತಿನ ನಡುವಿನ ಮನರಂಜನೆಯ ಹಾದಿಯಲ್ಲಿ ಪ್ರೇಕ್ಷಕರನ್ನು ಕೊಂಡೊಯ್ಯುವ ಸಾಹಸಮಯ ಪ್ರದರ್ಶನ.

ನಾಟಕ : ಬೆಕ್ಕಿಗೆ ಗಂಟೆ ಕಟ್ಟಿದವರು ಯಾರು?
ರಚನೆ : ಅ.ನಾ. ರಾವ್ ಜಾದವ್
ಸಂಗೀತ ಸಂಯೋಜನೆ : ಚಂದ್ರಶೇಖರಾಚಾ‌ರ್ ಹೆಗ್ಗೋಠಾರ
ಸಂಗೀತ ಸಾಂಗತ್ಯ : ಪ್ರಕಾಶ್‌ ಬಡಿಗೇರ್
ಚಿತ್ರ ವಿನ್ಯಾಸ: ಸತೀಶ್. ಸಿ ಎಲ್ (ಕಲಾ ಶಿಕ್ಷಕರು)
ವಸ್ತ್ರ ವಿನ್ಯಾಸ : ಕವಿತ ಎಸ್ ಮೈಸೂರು
ನಿರ್ದೇಶನ : ಸೋಮು ಪಾಟೀಲ್
ಮಾಗ೯ದಶ೯ನ : ದಿಲೀಪ್ ಕುಮಾರ್.ಆರ್ (ಚಿಕ್ಕಬಳ್ಳಾಪುರ)

26/05/2026

5 ನಾಟಕಗಳಲ್ಲಿ ಎರಡನೇ ನಾಟಕ ಪ್ರದರ್ಶನಗೊಂಡ
ಚಿತ್ರೀಕರಣದ ತುಣುಕುಗಳು.

ಚಿಕ್ಕಬಳ್ಳಾಪುರದ ಕನ್ನಡ ಭವನದಲ್ಲಿ “ವಸಂತ ಚಿಟ್ಟೆಗಳು” ಬಣ್ಣ ಹಚ್ಚಿದ ಸಂದರ್ಭ. ಪಾತ್ರಧಾರಿಗಳ ಹಾರಾಟ, ಮಾತು ಮಾತಿನ ನಡುವಿನ ಮನರಂಜನೆಯ ಹಾದಿಯಲ್ಲಿ ಪ್ರೇಕ್ಷಕರನ್ನು ಕೊಂಡೊಯ್ಯುವ ಸಾಹಸಮಯ ಪ್ರದರ್ಶನ.

ನಾಟಕ : ಕಲ್ಯಾಣದ ಕೂಗು
ರಚನೆ : ಡಾ.ಚಂದ್ರಶೇಖರ ಕಂಬಾರ
ಪ್ರಸ್ತುತಿ: ವಸಂತ ಚಿಟ್ಟೆಗಳು ಶಿಬಿರದ ಮಕ್ಕಳು
ಸಂಗೀತ ಸಂಯೋಜನೆ : ಚಂದ್ರಶೇಖರಾಚಾರ್ ಹೆಗ್ಗೋಠಾರ
ಸಂಗೀತ ಸಾಂಗತ್ಯ : ಪ್ರಕಾಶ್ ಬಡಿಗೇರ್
ಚಿತ್ರ ವಿನ್ಯಾಸ : ಸತೀಶ್. ಸಿ ಎಲ್ (ಕಲಾ ಶಿಕ್ಷಕರು)
ವಸ್ತ್ರ ವಿನ್ಯಾಸ : ಕವಿತ ಎಸ್ ಮೈಸೂರು
ವಿನ್ಯಾಸ & ನಿರ್ದೇಶನ : ದಿಲೀಪ್ ಕುಮಾರ್.ಆರ್ (ಚಿಕ್ಕಬಳ್ಳಾಪುರ)

22/05/2026

ಭಾಗ : 2
ವಸಂತ ಚಿಟ್ಟೆಗಳಾದ ಮಕ್ಕಳ ಸಂಭ್ರಮದ ಚಿತ್ರೀಕರಣದ ತುಣುಕುಗಳು…. ಬಯಲು ಸೀಮೆಯ ಜನರನ್ನು, ನೀರಿಗಾಗಿ ಹೋರಾಡಲು ಕರೆಯುತ್ತಿದ್ದಾರೆ.......
ಬರುವಿರಾ?
ಶಿಬಿರದಲ್ಲಿ ಕಲಿತ ಹಾಡುಗಳ ರಸದೌತಣ, ತೊದಲು ನುಡಿಗಳ ಸೊಗಸು, ಸಂಗೀತದ ಆರೋಹಣ–ಅವರೋಹಣಗಳ ಮನಮೋಹಕ ಕ್ಷಣಗಳು. ಪ್ರೇಕ್ಷಕರ ಚಪ್ಪಾಳೆಗಳ ಸುರಿಮಳೆ ನಡುವೆ ಮೂಡಿದ ಈ ನೆನಪುಗಳನ್ನು ಮತ್ತೊಮ್ಮೆ ಕೇಳಿ, ನೋಡಿ, ಅನುಭವಿಸಿ.

ಕಲೆ, ಸಾಹಿತ್ಯ ಸಂಸ್ಕೃತಿಯ ಬಗ್ಗೆ ಅಪಾರವಾದ ಗೌರವನ್ನು ಹೊಂದಿದ್ದು, ಕಲಾವಿದರನ್ನು ಗೌರವಿಸುತ್ತಾ ನೂರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನಿಡುತ...
18/05/2026

ಕಲೆ, ಸಾಹಿತ್ಯ ಸಂಸ್ಕೃತಿಯ ಬಗ್ಗೆ ಅಪಾರವಾದ ಗೌರವನ್ನು ಹೊಂದಿದ್ದು, ಕಲಾವಿದರನ್ನು ಗೌರವಿಸುತ್ತಾ ನೂರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನಿಡುತ್ತಾ ಕಾರ್ಯನಿರ್ವಹಿಸುತ್ತಿರುವ ನಿಮಗೆ ವಂದನೆಗಳು

ಶ್ರೀ ಜಯಕುಮಾ‌ರ್ (ಅಧ್ಯಕ್ಷರು, ಜೈ ಫೌಂಡೇಶನ್ ಮತ್ತು ಸಮಾಜ ಸೇವಕರು) ರವರಿಗೆ, ಸಕಲ ರಂಗಹೆಜ್ಜೆ ಟ್ರಸ್ಟ್‌ ಮತ್ತು ಎಲ್ಲಾ ಕಲಾಪೋಷಕರ ಪರವಾಗಿ ಜನ್ಮ ದಿನದ ಶುಭಾಶಯಗಳು........

18/05/2026

5 ನಾಟಕಗಳಲ್ಲಿ ಮೊದಲು ಪ್ರದರ್ಶನಗೊಂಡ ನಾಟಕ ಚಿತ್ರೀಕರಣದ ತುಣುಕುಗಳು.

ಚಿಕ್ಕಬಳ್ಳಾಪುರದ ಕನ್ನಡ ಭವನದಲ್ಲಿ “ವಸಂತ ಚಿಟ್ಟೆಗಳು” ಬಣ್ಣ ಹಚ್ಚಿದ ಸಂದರ್ಭ. ಪಾತ್ರಧಾರಿಗಳ ಹಾರಾಟ, ಮಾತು ಮಾತಿನ ನಡುವಿನ ಮನರಂಜನೆಯ ಹಾದಿಯಲ್ಲಿ ಪ್ರೇಕ್ಷಕರನ್ನು ಕೊಂಡೊಯ್ಯುವ ಸಾಹಸಮಯ ಪ್ರದರ್ಶನ.

ನಾಟಕ : ಪಂಜರಶಾಲೆ
ರಚನೆ : ಬಿ. ವಿ. ಕಾರಂತರು
ಪ್ರಸ್ತುತಿ: ವಸಂತ ಚಿಟ್ಟೆಗಳು ಶಿಬಿರದ ಮಕ್ಕಳು
ಸಂಗೀತ ಸಂಯೋಜನೆ : ಚಂದ್ರಶೇಖರಾಚಾರ್ ಹೆಗ್ಗೋಠಾರ
ಸಂಗೀತ ಸಾಂಗತ್ಯ : ಪ್ರಕಾಶ್ ಬಡಿಗೇರ್
ಚಿತ್ರ ವಿನ್ಯಾಸ : ಸತೀಶ್. ಸಿ ಎಲ್ (ಕಲಾ ಶಿಕ್ಷಕರು)
ವಸ್ತ್ರ ವಿನ್ಯಾಸ : ಕವಿತ ಎಸ್ ಮೈಸೂರು
ನಿರ್ದೇಶನ : ಅಭಿಷೇಕ್ ಆರ್ಯ
ಮಾಗ೯ದಶ೯ನ : ದಿಲೀಪ್ ಕುಮಾರ್.ಆರ್ (ಚಿಕ್ಕಬಳ್ಳಾಪುರ)

ಸಕಲ ರಂಗಹೆಜ್ಜೆ ಟ್ರಸ್ಟ್ ಚಿಕ್ಕಬಳ್ಳಾಪುರ

17/05/2026

ಭಾಗ : 1

ವಸಂತ ಚಿಟ್ಟೆಗಳಾದ ಮಕ್ಕಳ ಸಂಭ್ರಮದ ಚಿತ್ರೀಕರಣದ ತುಣುಕುಗಳು….

ಶಿಬಿರದಲ್ಲಿ ಕಲಿತ ಹಾಡುಗಳ ರಸದೌತಣ, ತೊದಲು ನುಡಿಗಳ ಸೊಗಸು, ಸಂಗೀತದ ಆರೋಹಣ–ಅವರೋಹಣಗಳ ಮನಮೋಹಕ ಕ್ಷಣಗಳು. ಪ್ರೇಕ್ಷಕರ ಚಪ್ಪಾಳೆಗಳ ಸುರಿಮಳೆ ನಡುವೆ ಮೂಡಿದ ಈ ನೆನಪುಗಳನ್ನು ಮತ್ತೊಮ್ಮೆ ಕೇಳಿ, ನೋಡಿ, ಅನುಭವಿಸಿ.

ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ 🙏

ನೂರಾರು ಮಕ್ಕಳ ಪ್ರತಿಭೆಯ ಅನಾವರಣಕ್ಕೆ ನೀವು ಸಹ ಸಾಕ್ಷಿಯಾಗಿರಿ.

ಇಂದಿಗೆ ಐದು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ “ವಸಂತ ಚಿಟ್ಟೆಗಳು” ಬೇಸಿಗೆ ಶಿಬಿರವು, ಚಿಕ್ಕಬಳ್ಳಾಪುರದ ಮಕ್ಕಳಲ್ಲಿ ಸಾಂಸ್ಕೃತಿಕ ಅರಿವು, ರಂಗ...
14/05/2026

ಇಂದಿಗೆ ಐದು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ “ವಸಂತ ಚಿಟ್ಟೆಗಳು” ಬೇಸಿಗೆ ಶಿಬಿರವು, ಚಿಕ್ಕಬಳ್ಳಾಪುರದ ಮಕ್ಕಳಲ್ಲಿ ಸಾಂಸ್ಕೃತಿಕ ಅರಿವು, ರಂಗಭೂಮಿ ಪ್ರೀತಿ ಮತ್ತು ಸೃಜನಶೀಲತೆಯನ್ನು ಬೆಳೆಸುವ ದಿಸೆಯಲ್ಲಿ ನಿರಂತರವಾಗಿ ಸಾಗುತ್ತಿರುವುದು ನಮ್ಮೆಲ್ಲರಿಗೂ ಅಪಾರ ಹೆಮ್ಮೆಯ ಸಂಗತಿಯಾಗಿದೆ.

ಸಕಲ ರಂಗ ಹೆಜ್ಜೆ ಟ್ರಸ್ಟ್ ವತಿಯಿಂದ ಆಯೋಜನೆಯಾಗುತ್ತಿರುವ ಈ ಶಿಬಿರವು, ನಾಟಕ, ಸಂಗೀತ, ಜಾನಪದ, ಪರಿಸರ ಕಾಳಜಿ, ಕಥೆ, ಸಾಹಿತ್ಯ ಹಾಗೂ ವಿವಿಧ ಕಲಾತ್ಮಕ ಚಟುವಟಿಕೆಗಳ ಮೂಲಕ ಮಕ್ಕಳ ಪ್ರತಿಭೆಗಳಿಗೆ ಹೊಸ ಬೆಳಕು ನೀಡುತ್ತಿದೆ.

ಈ ಐದು ವರ್ಷದ ಪಯಣದಲ್ಲಿ ನಮ್ಮೊಂದಿಗೆ ಕೈಜೋಡಿಸಿದ ಪೋಷಕರು, ಕಲಾವಿದರು, ಶಿಕ್ಷಕರು, ಸಂಪನ್ಮೂಲ ವ್ಯಕ್ತಿಗಳು, ಸಹಯೋಗಿಗಳು ಮತ್ತು ಪ್ರತಿಯೊಬ್ಬ ಮಕ್ಕಳಿಗೂ ಹೃತ್ಪೂರ್ವಕ ಧನ್ಯವಾದಗಳು.

ನಿಮ್ಮ ಪ್ರೀತಿ, ಪ್ರೋತ್ಸಾಹ ಮತ್ತು ಸಹಕಾರವೇ “ವಸಂತ ಚಿಟ್ಟೆಗಳು” ಶಿಬಿರದ ನಿಜವಾದ ಶಕ್ತಿ.


ಸಕಲ ರಂಗ ಹೆಜ್ಜೆ ಟ್ರಸ್ಟ್ (ರಿ.)
ಚಿಕ್ಕಬಳ್ಳಾಪುರ

ಮಕ್ಕಳ ರಂಗ ಹಬ್ಬ….“ವಸಂತ ಚಿಟ್ಟೆಗಳ” ಬಣ್ಣ ಬಣ್ಣದ ಹಾರಾಟ…..✨ತಾಳಕ್ಕೆ ಹೆಜ್ಜೆ ಹಾಕುವ ಕುಣಿತಗಳು,ಮನಸೆಳೆಯುವ ಪಾತ್ರಗಳು,ರಾಗ-ಲಹರಿಯ ಮಧುರ ಸವಿಗ...
07/05/2026

ಮಕ್ಕಳ ರಂಗ ಹಬ್ಬ….
“ವಸಂತ ಚಿಟ್ಟೆಗಳ” ಬಣ್ಣ ಬಣ್ಣದ ಹಾರಾಟ…..✨

ತಾಳಕ್ಕೆ ಹೆಜ್ಜೆ ಹಾಕುವ ಕುಣಿತಗಳು,
ಮನಸೆಳೆಯುವ ಪಾತ್ರಗಳು,
ರಾಗ-ಲಹರಿಯ ಮಧುರ ಸವಿಗಳು,
ಮಕ್ಕಳ ಪ್ರತಿಭೆಯ ಸಾಂಸ್ಕೃತಿಕ ರಸದೌತಣವನ್ನು ಸವಿಯಲು ಬನ್ನಿ….. 🎭🎶🌈

Address

Chik Ballapur

Website

Alerts

Be the first to know and let us send you an email when Sakala rangahejje trust-R posts news and promotions. Your email address will not be used for any other purpose, and you can unsubscribe at any time.

Share